ವಿಶ್ವಕಥಾಕೋಶದ 12ನೇ ಸಂಪುಟದಲ್ಲಿ ಯುಗೋಸ್ಲಾವಿಯಾ, ಬಲ್ಗೇರಿಯಾ, ಅಲ್ಬೇನಿಯಾ ದೇಶದ ಕತೆಗಳಿವೆ. ಬಾವಿಕಟ್ಟೆಯ ಬಳಿ -ಲಾಜಾ ಲಜಾರೆವಿಚ್ ಮಕ್ಕಳು ಮತ್ತು ದೊಡ್ಡವರು -ಐವಾನ್ ಚನ್ಕಾರ ಮುಸ್ತಾಫಾ ಮದಜರ್ -ಇವೊ ಆಂದ್ರಿತ್ಸ್ ಒಂದು ಚಲನಚಿತ್ರ: ಮೂರು ರೀಲುಗಳಲ್ಲಿ -ಸಿ. ಮೆಂದೆರೋವಿತ್ಸ್ ಯುದ್ಧ -ಮಿಲೊವನ್ ಜಿಲಾಸ್ ಛಾವಣಿ ಕಿತ್ತರು -ಅಲೆಕ್ಸ್ ಚಾತ್ಸಿ ಅಜ್ಞಾತ ಯೋಧ -ಫತ್ಮೀರ್ ಗಜಾತ ಸಂಗಾತಿಗಳು -ನಾಸಿ ಲೆರಾ ತಾಯಿ -ಇವಾಇಲೊ ಪೆತ್ರೋವ್ ಅಪರಿಚಿತ -ಯೋರ್ದಾನ್ ಯಾವ್ಕೋವ್ ಕಮಿಷನರ್ ಸಾಹೇಬರ ಕ್ರಿಸ್ಮಸ್ -ಎಲಿನ್-ಪೆಲಿನ್ ಕಾವ್ಯ -ವೆಸೆಲಿನ್ ಆಂದ್ರೆಯೇವ್.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE