ಜಿ.ಎ ಕುಲಕರ್ಣಿ ಅವರು ಮರಾಠಿ ಕಥಾ ಸಾಹಿತ್ಯದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಇವರ ಇಪ್ಪತ್ಕಾಲ್ಕು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಲೇಖಕ, ಮತ್ತು ಅನುವಾದಕ ಚಂದ್ರಕಾಂತ ಪೋಕಳೆ ಅವರು ಜಿ.ಎ ಅವರ ಐದು ರೂಪಕ ಕತೆಗಳನ್ನು ಬೇರೆ ಬೇರೆ ಕಥಾ ಸಂಗ್ರಹದಿಂದ ಆರಿಸಿ ಕನ್ನಡಕ್ಕೆ ’ಇಸ್ಕಿಲಾರ್’ ಕೃತಿಯನ್ನು ತಂದಿದ್ದಾರೆ.
ಈ ಸಂಗ್ರಹದಲ್ಲಿರುವ ಐದು ಕತೆಗಳು ಭಿನ್ನ ಮಾದರಿಯ ರೂಪಕ ಕತೆಗಳಾಗಿವೆ. ಪ್ರವಾಸಿ, ಇಸ್ಕಿಲಾರ್, ಆರ್ಫಿಯಸ್, ಯಾತ್ರಿಕ, ವಿದೂಷಕ ಕತೆಗಳನ್ನು ಈ ಕೃತಿ ಒಳಗೊಂಡಿದೆ.
ವಾಸ್ತವದಲ್ಲಿ ಸದಾ ಘಟಿಸುವ ಪ್ರಸಂಗವನ್ನು ಸರಳ ರೂಪದಲ್ಲಿ ಸ್ವೀಕರಿಸುವ ಬದಲು ಜಿ. ವಿ ಅವರ ಕತೆಯಲ್ಲಿಅವು ಬೇರೆ ರೂಪ ಪಡೆದುಕೊಳ್ಳುತ್ತವೆ. ಸಂಪೂರ್ಣ ಜೀವನವನ್ನೇ ಭಾಷೆಯನ್ಮೇ ರೂಪಕದ ಭಾಷೆಯಲ್ಲಿ ಮಂಡಿಸುವ ಕತೆಗಳಿವೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE