ತೇಜಸ್ವಿ ಕೆಲವು ಪ್ರಸಂಗಗಳು

Author : ಎಚ್.ಎಸ್. ಸತ್ಯನಾರಾಯಣ

Pages 109

₹ 150.00




Year of Publication: 2024
Published by: ಅಲಂಪು ಪ್ರಕಾಶನ
Address: #467, 16ನೇ ಕ್ರಾಸ್, ಬಿಇಎಂಲ್ ಲೇಔಟ್ 1ನೇ ಹಂತ, ಬಸವೇಶ್ವರ ನಗರ, ಬೆಂಗಳೂರು-560079
Phone: 9742003323

Synopsys

‘ತೇಜಸ್ವಿ ಕೆಲವು ಪ್ರಸಂಗಗಳು’ ಎಚ್.ಎಸ್. ಸತ್ಯನಾರಾಯಣ ಅವರ ತೇಜಸ್ವಿ ಕುರಿತ ಬರಹಗಳ ಸಂಗ್ರಹವಾಗಿದೆ. ಕೃತಿಗೆ ಡಾ. ಸರ್ವೇಶ್ ಬಂಟಹಳ್ಳಿ ಹಾಗೂ ದೊಡ್ಡಕಲ್ಲಳ್ಳಿ ನಾರಾಯಣಪ್ಪ ಅವರ ಬೆನ್ನುಡಿ ಬರಹವಿದೆ; ಪ್ರಕೃತಿಯೊಡನೆ ಸುಖ ದುಃಖಗಳ ಅವಿನಾಭಾವ ಸಂಬಂಧ ಹೊಂದಿದ್ದ ಅಪರೂಪದ ಲೇಖಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆಯುವ, ಬದುಕುವ ಬಗೆಯನ್ನು ನಮಗೆಲ್ಲ ಕಲಿಸಿದವರು. ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಈ ಕೃತಿಯಲ್ಲಿ ಲೇಖಕರ ಸ್ವಾನುಭವದ ಜೊತೆಜೊತೆಗೆ ಕೇಳಿದ, ಓದಿದ ಪುಟ್ಟ ಪುಟ್ಟ ಸಂಗತಿಗಳು ಜೊತೆಗೂಡಿ ಇಡಿಯಾಗಿ ತೇಜಸ್ವಿಯವರನ್ನು ಪರಿಚಯ ಮಾಡಿಕೊಡುತ್ತದೆ. ಈ ಬಿಡಿ ಬಿಡಿ ಬರಹಗಳನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಬಹುದು, ಎಲ್ಲಿ ಬೇಕಾದರೂ ನಿರ್ಗಮಿಸಬಹುದು. ತೇಜಸ್ವಿಯವರ ವಿಸ್ತಾರ ಬದುಕಿನ ಹಲವು ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಈ ಚಿಟ್ಟೆ ಕತೆಗಳು ಸಫಲವಾಗಿವೆ. ತೇಜಸ್ವಿಯವರ ಬದುಕು-ಬರಹಗಳ ಅಬ್ಬಿಗೆ ಇದೊಂದು ಪುಟ್ಟ ಹಾಯಿದೋಣಿಯಂತಹ ಪುಸ್ತಕ ತೇಜಸ್ವಿಯವರ ಸ್ವಭಾವವನ್ನು ಚೆನ್ನಾಗಿ ಅರಿತಿದ್ದ ಡಾ.ಎಚ್.ಎಸ್. ಸತ್ಯನಾರಾಯಣ ಅವರು ಯಾವುದೇ ಅತಿರೇಕದ ವರ್ಣನೆಗಿಳಿಯದೆ, ಒಂದು ಬಗೆಯ ನಿರ್ಲಿಪ್ತತೆಯನ್ನು ಕಾಯ್ದುಕೊಂಡು ತಮಗೆ ಕಾಣಿಸಿದ್ದನ್ನು ಓದುಗರಿಗೂ ತೋರಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

About the Author

ಎಚ್.ಎಸ್. ಸತ್ಯನಾರಾಯಣ

ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...

READ MORE

Related Books