ಎಫ್.ಟಿ.ಹಳ್ಳಿಕೇರಿ ಅವರು ಸಂಪಾದಿಸಿರುವ ಕೃತಿ ಲಕ್ಕಣ್ಣ ದಂಡೇಶ ಕವಿಯ ಶಿವತತ್ವ ಚಿಂತಾಮಣಿ. ಕುಲಪತಿ ಡಾ.ಸ.ಚಿ.ರಮೇಶ ಅವರು ಹೇಳುವಂತೆ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯು ಶಿವನ ಇಪ್ಪತ್ತೇಯದು ಲೀಲೆಗಳ ನಿರೂಪಣೆ, ಶಿವಶರಣರ-ಶಿವಭಕ್ತರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಗಮನಸೆಳೆಯುವ ಒಂದು ಸಾಂಸ್ಕೃತಿಕ ಕೃತಿಯಾಗಿದ್ದು, ಕವಿ ತನ್ನ ಸಮಕಾಲೀನ ಶಿವಶರಣರು ಮತ್ತು ಶಿವಭಕ್ತರು ಕೈಗೊಂಡಿದ್ದ ಕಾಯಕಗಳನ್ನು ದಾಖಲಿಸಿದ್ದಾನೆ. ಇಂತಹ ಅಪರೂಪದ ಕೃತಿ ಅಧ್ಯಯನಕ್ಕೆ ಉಪಲಬ್ಧವಿರಲಿಲ್ಲ. ಈ ಕೊರತೆಯನ್ನು ಗಮನಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರೊ. ಎಫ್.ಟಿ.ಹಳ್ಳಿಕೇರಿ ಅವರು ಹೊಸದಾಗಿ ದೊರೆತ ಹಸ್ತಪ್ರತಿಗಳ ನೆರವಿನಿಂದ ಪರಿಷ್ಕರಿಸಿದರು. ಉಪಯುಕ್ತವಾದ ಪ್ರಸ್ತಾವನೆಯಲ್ಲಿ ಲಕ್ಕಣ್ಣ ದಂಡೇಶ ಕವಿಯ ಇತಿವೃತ್ತ ವಿಚಾರ, ಶಿವತತ್ವ ಚಿಂತಾಮಣಿ ಕಾವ್ಯದ ಸ್ವರೂಪ, ಕಥಾಸಾರ, ಸಾಂಸ್ಕೃತಿಕ, ಚಾರಿತ್ರಿಕ ಮತ್ತು ಸಾಹಿತ್ಯಿಕ ಸಂಗತಿಗಳ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...
READ MORE