ಕರ್ನಾಟಕದಲ್ಲಿ ೨೪ ಆಡಳಿತ ವಿಭಾಗಗಳ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚರಿತ್ರೆಗಳನ್ನು ದಾಖಲಿಸಿದ ಬಹುಮುಖ್ಯ ಕೃತಿ ಇದು.
ಕರ್ನಾಟಕದ ಆಡಳಿತ ವಿಭಾಗಗಳ ಸೂಚನೆಗಾಗಿ ತೀರ ಪ್ರಾಚೀನ ಕಾಲದಲ್ಲಿ ಅಂದರೆ, ಶಾತವಾಹನರ ಕಾಲದಲ್ಲಿ ಭುಕ್ತಿ, ರಟ್ಟ ಎಂಬ ಉತ್ತರ ಪದಗಳನ್ನು ಬಳಸಲಾಗಿದೆ. ಕದಂಬರ ಕಾಲದಲ್ಲಿ ವಿಷಯ, ಮಂಡಲ, ರಾಷ್ಟ್ರ ಎಂಬವು ಉತ್ತರ ಪದಗಳು, ಬಾದಾಮಿ ಚಲುಕ್ಯರ ಕಾಲದಲ್ಲಿ ವಿಷಯ, ಆಹಾರ, ಭೋಗ, ರಾಷ್ಟ್ರ ಎಂಬ ಉತ್ತರ ಪದಗಳು ಕಾಣುತ್ತವೆ. ರಾಷ್ಟ್ರಕೂಟ ಕಾಲದಿಂದ ನಾಡು, ನಾಟ್ಟು, ಪಾಡಿ, ಮಂಡಲ, ವಿಷಯ, ಜನಪದ, ಭೋಗ ಪದಗಳು ಬಳಕೆಗೊಂಡಿವೆ. ಇದು ಕಲ್ಯಾಣ ಚಾಲುಕ್ಯ, ಕಲಚುರಿ, ಯಾದವ ಮತ್ತು ಹೊಯ್ಸಳರ ವರೆಗೆ ಮುಂದುವರಿದು ವಿಜಯನಗರ ಕಾಲಕ್ಕೆ ಒಮ್ಮೆಲೇ ರಾಜ್ಯ, ವೇಂಠೆ, ವೇಂಠಕ, ವಳಿತ, ಚಾವಡಿ, ಮಾಗಣಿ ಸೀಮೆ ಪದಗಳು ಕಾಣಿಸಿಕೊಳ್ಳುತ್ತವೆ. ಮರಾಠರ ಕಾಲದಲ್ಲಿ ಮಹಲು ಇತ್ಯಾದಿ ಪದಗಳು ಬಳಕೆಯಾಗಿವೆ ಎಂಬಂತಹ ಮಹತ್ವದ ಸಂಗತಿಗಳನ್ನು ಕೃತಿಯಿಂದ ಅರಿಯಬಹುದು.
ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಂ.ಎಂ. ಕಲಬುರ್ಗಿ ಸಂಶೋಧಿಸದ ಕ್ಷೇತ್ರವೇ ಇಲ್ಲ ಎನ್ನುವುದಕ್ಕೆ ಈ ಕೃತಿ ಉದಾಹರಣೆ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE