ಮೊದಲ ನುಡಿ, ಮುನ್ನುಡಿ, ಪ್ರಸ್ತಾವನೆ ಇತ್ಯಾದಿ ಒಂದು ಕೃತಿಗೆ ಸಂಬಂಧಿಸಿದ ಮೊದಲ ಮಾತುಗಳನ್ನು, ಕೃತಿಯ ವಸ್ತು, ರಚನೆಯ ಉದ್ದೇಶ ಇತ್ಯಾದಿಗಳ ಹಿನ್ನೆಲೆಯಲ್ಲಿ ಆಯಾ ಲಿಕರೇ ದಾಖಲಿಸುವುದು ಅವಶ್ಯಕ ಎಂದು ನಂಬಿರುವವನು ನಾನು, ಆದರೆ ಕೆಲವು ಬಾರಿ ಕೃತಿಕಾರರ ಮತ್ತು ಕೃತಿಯ ಪರಿಚಯದ ಸಲುವಾಗಿ ಕೃತಿಕಾರರನ್ನು ಬಲ್ಲ ಹಾಗೂ ಕೃತಿಯನ್ನು ಓದಿದ ಒಬ್ಬ ವ್ಯಕ್ತಿಯಿಂದ ಮುನ್ನುಡಿ ಬರೆಸುವ ಅಭ್ಯಾಸ ಇದೆ. ಬಹುತೇಕ ಅದೇ ಕಾರಣದಿಂದ ನನಗೆ ಈ ಮುನ್ನುಡಿ ಬರೆಯುವ ಅವಕಾಶ ದೊರೆತಿದೆ ಎಂದು ತಿಳಿದಿದ್ದೇನೆ. ಈ ಬರವಣಿಗೆಯ ಆರಂಭದಲ್ಲೇ ನಾನು ತಿಳಿಸಿದಂತೆ ಲೇಖಕಿಯು ಜನಪದ ಸಾಹಿತ್ಯ, ಶಿಷ್ಟ ಸಾಹಿತ್ಯ, ಶಾಸನ ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳನ್ನು ಕುರಿತು ಲೇಖನಗಳನ್ನು ಪ್ರಸ್ತುತ ಪಡಿಸಿದ್ದಾರೆ. ಜನಪದ ಸಾಹಿತ್ಯ ಮತ್ತು ಶಿಷ್ಟ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಲೇಖಕಿಯಲ್ಲಿರುವ ಸಂಶೋಧಕಿ ಕೆಲಸ ಮಾಡಿದ್ದಾಳೆ, ಉಳಿದ ವಿಷಯಗಳಲ್ಲಿ ಮಾಹಿತಿ ಸಂಗ್ರಹಣೆ ಮತ್ತು ಪರಿಚಯದ ಕೆಲಸ ಮಾತ್ರ ನಡೆದಿದೆ, ಅಂತಹ ಕೆಲಸಗಳಿಗೆ ಇತಿ ಮಿತಿ ಇದ್ದೇ ಇರುತ್ತದ ಆದ್ದರಿಂದ ಇದು ಸಂಶೋಧಕಿಯ ದೌರ್ಬಲ್ಯ ಎಂದು ಹೇಳುವುದು ಸಾಧ್ಯವಿಲ್ಲ, ಯಾವ ಸಂದಭ ಎಂತಹ ಓದುಗ, ಕೇಳುಗರಿಗಾಗಿ ಲೇಖಿನ ಸಿದ್ಧವಾಗಿದೆ ಎಂಬುದನ್ನು ಮರೆಯುವಂತಿಲ್ಲ. ಯಾವದೇ ಸಂಶೋಧಕ ಲೇಖಕರಿಗೆ ಆರಂಭದ ದಿನಗಳಲ್ಲಿ ಇಂತಹ ಸಂದಿಗ್ಧಗಳು ಇದ್ದೇ ಇರುತ್ತದೆ ಅಂತಹ ಸಂದಿಗ್ಧಗಳನ್ನು ಸಲೀಸಾಗಿ ದಾಕ್ಕೆ ಗಟ್ಟಿಯಾಗುತ್ತಾ ಹೋದರೆ ನಿಜವಾದ ಸಂಶೋಧಕ ಸಂಶೋಧನೆ ಪ್ರಕಟಗೊಳ್ಳುವುದು ಕಷ್ಟವಲ್ಲ ಎಂದು ಡಾ.ಎಚ್. ಎಸ್ ಗೋಪಾಲ್ ರಾವ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ. `ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ...
READ MORE