ಕನ್ನಡದ ಮೊದಲ ಶಾಸ್ತ್ರಗ್ರಂಥ ’ಕವಿರಾಜಮಾರ್ಗ’. ನಾಡಿನ ಸಂಸ್ಕೃತಿಯ ಒಟ್ಟಾರೆ ಸ್ವರೂಪವನ್ನು ತಿಳಿಸಿಕೊಡುವ ಈ ಕೃತಿ ತನ್ನ ಅಸ್ತವ್ಯಸ್ತತೆ ಕಾರಣಕ್ಕಾಗಿ ಸಂಶೋಧಕರಿಗೆ ಸವಾಲೆಸೆಯುತ್ತಿತ್ತು. ಕೃತಿಕಾರ ಯಾರು ಎಂಬುದರಿಂದ ಹಿಡಿದು, ನಿರೂಪಣೆಯವರೆಗೆ ನಿಖರತೆಯನ್ನು ಬಯಸುತ್ತಿತ್ತು.
ಅಂತಹ ಸಂದರ್ಭದಲ್ಲಿ ಕಲಬುರ್ಗಿ ಅವರು (ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ- ಇದು ಅವರ ಪಿಎಚ್ ಡಿ ಗ್ರಂಥ ಕೂಡ) ಒಂದು ಅಧ್ಯಯನ ಶಿಸ್ತಿನ ಮೂಲಕ ಕವಿರಾಜಮಾರ್ಗವನ್ನು ಬಿಚ್ಚಿಡುತ್ತ ಹೋದರು. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಇದೊಂದು ಮುಖ್ಯ ಗ್ರಂಥ. ಸಂಶೋಧನೆ ಹೇಗಿರಬೇಕು ಎಂಬುದಕ್ಕೂ ಮಾದರಿ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE