ಶಂ.ಬಾ. ಜೋಶಿಯವರ ’ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ’ ಕನ್ನಡ ನಾಡಿನ ಇತಿಹಾಸಪೂರ್ವ ಚರಿತ್ರೆ ಅವಲೋಕಿಸುವ ಮಹತ್ವದ ಗ್ರಂಥ. ಶಾತವಾಹನರ ಕಾಲದ ನಂತರದ ಕರ್ಣಾಟಕದ ಇತಿಹಾಸ ಮತ್ತು ಸಂಸ್ಕೃತಿಗಳನ್ನು ವಿಶ್ಲೇಷಿಸುವ ಗ್ರಂಥಗಳಿವೆ. ಆದರೆ ಅದಕ್ಕಿಂತ ಮುಂಚಿನ ಕರ್ಣಾಟಕದ ವಿಷಯಗಳನ್ನು ತಿಳಿಸುವ ಗ್ರಂಥಗಳ ಕೊರತೆಯನ್ನು ಈ ಪುಸ್ತಕ ನೀಗಿಸುತ್ತದೆ. ಕನ್ನಡನಾಡು ಯಾವ ನೆಲಗಟ್ಟಿನ ಮೇಲೆ ನಿಂತಿದೆ ಎಂದು ಅವಲೋಕಿಸುವ ಪ್ರಯತ್ನವನ್ನು ಶಂ.ಬಾ. ಅವರು ಮಾಡಿದ್ದಾರೆ. ಈ ವಿಷಯದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಅನೇಕ ಹೊಸ ವಿಷಯ ತಿಳಿಸುತ್ತದೆ. ಈ ಗ್ರಂಥ ಓದುವಾಗ ಕಂಡುಬರುವ ಶಂ.ಬಾ. ಜೋಶಿಯವರ ಅಪಾರ ವಿದ್ವತ್ತು ಬೆರಗುಗೊಳಿಸುತ್ತದೆ. ಅವರು ಬಳಸುವ ಸಾಧನಗಳು – ಇತಿಹಾಸಪೂರ್ವ ಚರಿತ್ರೆ, ಮಾನವಶಾಸ್ತ್ರ, ಸಮಾಜಶಾಸ್ತ್ರ ಭಾಷಾಶಾಸ್ತ್ರ, ಶಾಸನಶಾಸ್ತ್ರ, ಸಾಹಿತ್ಯ ವೇದೋಪನಿಷತ್ತುಗಳು ಪುರಾಣಗಳು, ಐತಿಹ್ಯಗಳು ಮುಂತಾದ ಭಿನ್ನ ಶಾಸ್ತ್ರಗಳಿಗೆ ಸಂಬಂಧಪಟ್ಟವು. ಅವುಗಳನ್ನು ಉಪಯೋಗಿಸುವ ಪ್ರತಿಭೆ ಅಸಾಧಾರಣ.
ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ-1970