ಸಂಶೋಧನಾ ಲೇಖನಗಳ ಸಂಕಲನ 'ಸಮುದಾಯ ಸಂಸ್ಕೃತಿ'. ಈ ಕೃತಿಯಲ್ಲಿ ಒಟ್ಟು 15 ಲೇಖನಗಳಿವೆ. ಮಾದಿಗ ಸಮುದಾಯದ ವಿವಾಹದಲ್ಲಿ ಬದಲಾವಣೆ, ಬೇಡ ಬುಡಕಟ್ಟಿನ ಪಾರಂಪರಿಕ ವೈದ್ಯ ಪದ್ಧತಿ, ಭಂಗಿ ಸಮುದಾಯದ ಪಕ್ಷಿ ನೋಟ, ನೇಕಾರ ಸಮುದಾಯಗಳ ವೃತ್ತಿ ಹಾಗೂ ಬದುಕಿನ ಸ್ಥಿತ್ಯಂತರ, ಕಾಡು ಕುರುಬ ಮತ್ತು ಜೇನುಕುರುಬ ಸಮುದಾಯಗಳ ಪಾರಂಪರಿಕ ಜ್ಞಾನ, ಅಭಿವೃದ್ಧಿ ಪ್ರಜಾಪ್ರಭುತ್ವ, ಮೀಸಲಾತಿಯ ಸಮಸ್ಯೆ ಸವಾಲುಗಳು, ವಚನಗಳಲ್ಲಿ ಸಮಾನತೆಯ ಸಂವೇದನೆಗಳು, ಸಾಮಾಜಿಕ ಬದುಕು ಮತ್ತು ಚೋಮನ ದುಡಿ, ಗಿರಿನಾಡು ತಾಯಂದಿರ ಆರೋಗ್ಯದ ಸಮಸ್ಯೆಗಳು, ಹಿರಿಯ ನಾಗರಿಕರು ಮತ್ತು ಆರೋಗ್ಯ, ಭಾವೈಕ್ಯತೆಯ ಕೇಂದ್ರವಾಗಿ ಸಿರಸಪ್ಪಯ್ಯನ ಮಠ ಇಂತಹ ವಿವಿಧ ವಿಷಯಗಳ ಕುರಿತು ಚರ್ಚೆ, ವಿಮರ್ಶೆ ಮತ್ತು ವಿಶ್ಲೇಷಣೆ ಇಲ್ಲಿಯ ಲೇಖನಗಳಲ್ಲಿವೆ.
ಸಂಶೋಧಕ, ಬರಹಗಾರ ಸಿ.ಆರ್. ಕಂಬಾರ ಶೆಟ್ಟಿಕೇರಾ ಜನಿಸಿದ್ದು 1985 ಆಗಸ್ಟ್ 1ರಂದು ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾದಲ್ಲಿ. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದಾರೆ. ಶೆಟ್ಟಿಕೇರಾ ಗ್ರಾಮಾಧ್ಯಯನ, ಗಿರಿನಾಡು, ಬೀದಿ ಬದುಕು, ಸಾಮಾಜಿಕ ಬಿಕ್ಕಟ್ಟುಗಳು, ಸಮುದಾಯ ಸಂಸ್ಕೃತಿ, ಶೋಧ ಹಾಗೂ ಜಾನಪದ ಸಂಗಮ ಇವರ ಪ್ರಮುಖ ಕೃತಿಗಳು. ಶೆಟ್ಟಿಕೇರಾ ಗ್ರಾಮಾಧ್ಯಯನ ಕೃತಿಗೆ 2017ರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪುರಸ್ಕಾರ ದೊರೆತಿದೆ. ...
READ MORE