ಕನ್ನಡ ಗ್ರಾಮವೊಂದರ ಪಥಾವಲೋಕನವನ್ನು ಪ್ರತಿನಿಧಿಸುವ “ಕಾಂತಾಮರವಾದ ಕಾಂತಾವರ” ಕೃತಿಯು ಯಾವುದೇ ಗ್ರಾಮೀಣ ಸಾಹಿತ್ಯ- ಸಂಸ್ಕೃತಿಯ ಅಧ್ಯಯನಕ್ಕೆ ಆಕರ ಗ್ರಂಥ ಎನ್ನಬಹುದು. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಹೇಳಿರುವಂತೆ “ಕಾಂತಾವರ ಎಂಬ ಹಳ್ಳಿಯ ಕನ್ನಡ ಮರವು ಜಂಗಮವಾಗಿ ಕನ್ನಡ ಭಿಕ್ಷೆಯನ್ನು ಉಣ್ಣುವ ಸೊಬಗಿನ ಸಂಭ್ರಮವನ್ನು ಹಂಚಿಕೊಳ್ಳಲು ಆ 43 ಮೊಳದ ಬಟ್ಟೆಯನ್ನು ’ಚಿತ್ರಪಟ ರಾಮಾಯಣ’ದಂತೆ ಚಿತ್ರಪಟ ಕಾಂತಾವರ’ ಮಾಡಿದರು. ಈ ಕಿರುದಾರಿಯು ಕರ್ನಾಟಕದಲ್ಲಿ ಹೆದ್ದಾರಿಯಾದ ಅಪೂರ್ವ ಮಾದರಿ ಇದು. ನಾ. ಮೊಗಸಾಲೆ ಎಂಬ ಆಯುರ್ವೇದ ವೈದ್ಯ ನಡೆಸಿದ ಮಾಂತ್ರಿಕ ಪ್ರಯೋಗಗಳ ಸಾಹಸಗಾಥೆ “ಕಾಂತಾವರ’ ಎಂದು ಹೇಳುವ ಮೂಲಕ ಕೃತಿಯ ಮಹತ್ವವನ್ನು ಹೆಚ್ಚಿಸಿದ್ದಾರೆ.
ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ 'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...
READ MORE