ನಾಲ್ಕು ಭಾಗಗಳಲ್ಲಿ ಹರಡಿರುವ ’ಹಳಗನ್ನಡ- ಭಾಷೆ ಭಾಷಾ ವಿಕಾಸ ಭಾಷಾ ಬಾಂಧವ್ಯ ಅಧ್ಯಯನ’ 18 ವಿದ್ವಾಂಸರ 32 ಪ್ರಬಂಧಗಳ ಸಂಕಲನ. 2,200 ಶಾಸನಗಳನ್ನು ಅಧ್ಯಯನ ಮಾಡಿ ಸಂಕಲನವನ್ನು ರೂಪಿಸಲಾಗಿದೆ.
ಕೃತಿ ಕುರಿತು ಲೇಖಕ ಷ ಶೆಟ್ಟರ್ - ’ಈ ಅಧ್ಯಯನದ ವೈಶಿಷ್ಟ್ಯವೆಂದರೆ ಈವರೆಗೂ ನಿಲುಕದಷ್ಟು ಸಂಖ್ಯೆಯ ಹಳಗನ್ನಡ ಶಾಸನಗಳನ್ನು ಬಳಸಿಕೊಂಡಿರುವುದು; ಇಂದಿನವರೆಗೂ ಚರ್ಚಿಸದಿರುವ ಕೆಲವು ವಿಷಯಗಳ ಕಡೆ ಮೊದಲ ಬಾರಿಗೆ ಗಮನ ಹರಿಸಿರುವುದು; ಹಿಂದೆಂದೂ ಹಂಚಿಕೊಳ್ಳದಷ್ಟು ಸಂಖ್ಯೆಯ ವಯೋವೃದ್ಧರೂ ಜ್ಞಾನವೃದ್ದರೂ ವೇದಿಕೆಯನ್ನು ಹಂಚಿಕೊಂಡಿರುವುದು, ಹಳಗನ್ನಡ ಭಾಷೆಯ ಸರ್ವತೋಮುಖ ಚರ್ಚೆ ಇಲ್ಲಿ ಆಗಿದೆ ಎಂದರೆ ಅದು ಉತ್ತೇಕ್ಷೆಯ ಮಾತಾಗಬಹುದು; ಆದರೆ ಅಧ್ಯಯನಕ್ಕೊಳಪಡಿಸಿಕೊಂಡ ಕ್ಷೇತ್ರಗಳ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ ಎಂದು ಹೇಳಲು ಹಿಂಜರಿದರೆ ಕೃತ್ರಿಮ ಸೌಜನ್ಯವೆನಿಸಬಹುದು. ಶತಾಯುಷಿಗಳೂ, ಜ್ಞಾನವೃದ್ಧರೂ, ಜೀವನದ ಬಹುಭಾಗವನ್ನು ಒಂದೊಂದು ಕ್ಷೇತ್ರಕ್ಕೆ ಮೀಸಲಿಟ್ಟ ವಿದ್ವಾಂಸರೂ, ತಮ್ಮ ಪ್ರತಿಭೆಯ ಮೂಲಕ ಈ ಅಧ್ಯಯನ ಕ್ಷೇತ್ರವನ್ನು ವಿಸ್ತರಿಸುವ ಭರವಸೆ ಮೂಡಿಸುವ ಯುವಕರು, ನನ್ನೊಡನೆ ಸಹಕರಿಸದಿದ್ದರೆ ಈ ಅಧ್ಯಯನವು ಈಗಿನ ಗುಣಮಟ್ಟವನ್ನು ಪಡೆದುಕೊಳ್ಳುತ್ತಿರಲಿಲ್ಲ ಎನ್ನುವುದಂತೂ ನಿಜ...’ ಎಂದಿದ್ದಾರೆ.
ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...
READ MORE