ಹನ್ನೆರಡನೇ ಶತಮಾನಕ್ಕೂ ಹಿಂದೆ ಅಂದರೆ ಶರಣ ಚಳವಳಿ ಆರಂಭವಾಗುವುದಕ್ಕೂ ಮೊದಲು ಶೈವ ಸಂಪ್ರದಾಯ ಹೇಗಿತ್ತು ಎಂಬುದನ್ನು ತಿಳಿಸಿಕೊಡುವ ಕೃತಿ ’ಶುದ್ಧಶೈವ ಮತ್ತು ಗೋಳಕಿಮಠದ ಸಂಪ್ರದಾಯ’.
ಪಾಶುಪತ, ನಕುಲೀಶ, ಮಹಾವ್ರತ ಪಂಥಗಳ ಅಧ್ಯಯನವನ್ನು 20ನೇ ಶತಮಾನದ ವಿದ್ವಾಂಸರು ನಡೆಸಿದ್ದರಾದರೂ ಶುದ್ಧಶೈವ ಪಂಥದ ಅಧ್ಯಯನ ಸಮಂಜಸ ಎನಿಸಿರಲಿಲ್ಲ. ಪರಿಣಾಮ ಡಾ.ಎಂ.ಎಂ. ಕಲಬುರ್ಗಿ ಅವರ ಚಿತ್ತ ಅತ್ತ ಹರಿಯಿತು. ಹದಿನೈದನೇ ಶತಮಾನದ ಹೊತ್ತಿಗೆ ಶೈವಧರ್ಮ ಹೇಗೆ ಶರಣ ಚಳವಳಿಯನ್ನು ಒಳಗೊಳ್ಳತೊಡಗಿತು, ಚತುರಾಚಾರ್ಯರು, ಪಂಚಾಚಾರ್ಯರು ಮುನ್ನೆಲೆಗೆ ಬಂದಿದ್ದು ಹೇಗೆ, ’ಸಿದ್ಧಾಂತ ಶಿಖಾಮಣಿ’ ಕೃತಿ ಯಾಕೆ ರಚನೆಯಾಯಿತು ಮುಂತಾದ ವಿಚಾರಗಳು ಸ್ಪಷ್ಟಗೊಳ್ಳುತ್ತ ಹೋದುದು ಈ ಮಹತ್ವದ ಕೃತಿಯ ಮೂಲಕವೇ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE