‘ನೀರದೀವಿಗೆ’ ಅಗ್ನಿ ಮತ್ತು ಜಲ ; ಕೆ.ವೈ. ನಾರಾಯಣಸ್ವಾಮಿ ಅವರು ಪಿ.ಎಚ್.ಡಿ/ಗಾಗಿ ರಚಿಸಿದ ಮಹಾಪ್ರಬಂಧ. ದೇಶದ ಸಂಸ್ಕೃತಿಯನ್ನು ‘ಅಗ್ನಿ’ ಮತ್ತು ‘ಜಲ ಮೂಲಕ ಹೊಸ ರೀತಿಯಾಗಿ ವ್ಯಾಖ್ಯಾನಿಸಲಾಗಿದೆ. 2000ರಲ್ಲಿ ಲೋಹಿಯಾ ಪ್ರಕಾಶನ ತದನಂತರ ದೇಸಿ ಪುಸ್ತಕ ಪ್ರಕಾಶನವು 2020ರಲ್ಲಿ ಈ ಕೃತಿಯನ್ನು ಮರು ಮುದ್ರಿಸಿದೆ
ಮೊದಲ ಮುದ್ರಣಕ್ಕೆ ಹಿರಿಯ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಬರೆದಿದ್ದ ಬೆನ್ನುಡಿಯ ನುಡಿಗಳನ್ನು ಎರಡನೇ ಮುದ್ರಣಕ್ಕೂ ಬಳಸಿಕೊಳ್ಳಲಾಗಿದೆ. ನೀರದೀವಿಗೆ ಒಂದು ಅಪರೂಪದ ಸಂಶೋಧನಾ ಕೃತಿ. ಈ ದೇಶದ ಸಂಸ್ಕೃತಿಯನ್ನು ಅಗ್ನಿ ಹಾಗೂ ಜಲಗಳ ಮೂಲಮಾನದಲ್ಲಿ ಗ್ರಹಿಸಿ ವ್ಯಾಖ್ಯಾನಿಸಿರುವ ಕ್ರಮ, ಈವರೆಗಿನ ಗ್ರಹಿಕೆಗಳಿಗಿಂತ ಭಿನ್ನವೂ ತರ್ಕಬದ್ಧವೂ, ಹೊಸಬಗೆಯದೂ ಆಗಿದೆ ಎಂದು ಜಿ.ಎಸ್. ಶಿವರುದ್ರಪ್ಪ ಅಭಿಪ್ರಾಯ.ಪಟ್ಟಿದ್ದಾರೆ.
ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಮತ್ತು ಅಕಾಡೆಮಿಕ್ ವಲಯಗಳಲ್ಲಿ ಕೆ.ವೈ.ಎನ್ ಎಂದೇ ಚಿರಪರಿಚಿತರಾಗಿರುವ ಕೈ.ವೈ.ನಾರಾಯಣಸ್ವಾಮಿಯವರು ಮೂಲತಃ ಕೋಲಾರದವರು. ಕೋಲಾರ ಜಿಲ್ಲೆಯ ಮಾಸ್ತಿ ಬಳಿ ಇರುವ ಮಾಲೂರು ತಾಲೋಕಿನ ‘ಕುಪ್ಪೂರು’ ಕೆವೈಎನ್ ಅವರ ಹುಟ್ಟೂರು. ತಂದೆ-ಯಾಲಪ್ಪ ಮತ್ತು ತಾಯಿ- ಮುನಿಯಮ್ಮ. ಇವರ ಪೂರ್ಣ ಹೆಸರು ‘ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿ’. ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾಸ್ತಿಯಲ್ಲಿ ಮುಗಿಸಿದ ನಂತರ ಬೆಂಗಳೂರಿಗೆ ಬಂದು ಪದವಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಮುಗಿಸುತ್ತಾರೆ. ಇವರ ಪಿ.ಎಚ್.ಡಿ ಪ್ರಬಂಧವಾದ ‘ನೀರ ದೀವಿಗೆ’ ಈ ದೇಶದ ಸಂಸ್ಕೃತಿಯನ್ನು ...
READ MORE