ಅಕ್ಷರ ಜಗತ್ತಿನಲ್ಲಿ ಜಾತ್ರೆ-ದೇವರ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂದು ಹೇಳುವ ಸಂದರ್ಭದಲ್ಲಿ”ಪರೀಷೆ v/s ಮಾನ್ಯೇವು’ ಕೃತಿ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ನಾಡಿನ ಬಹುತೇಕ ತಳ ಸಮುದಾಯಗಳು ದೈವಾರಾಧನೆಯನ್ನು ಬಹು ವಿಶಿಷ್ಟವಾಗಿ ಕಾಯ್ದುಕೊಂಡು ಬಂದಿವೆ. ಇವುಗಳಿಗೆ, ಸಮಾಜ ಮಾತ್ರವಲ್ಲ; ಇತಿಹಾಸ, ಪುರಾಣದ ತಳಕು ಇರುವುದನ್ನೂ ಗಮನಿಸಬಹುದು. ಇದರಿಂದ, ತಳ ಸಮುದಾಯಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ -ಸಂಸ್ಕಾರ ಇದೆ ಎಂಬುದು ಸಾಬೀತಾಗುತ್ತದೆ ಎಂಬ ಹೊಳವು ಈ ಕೃತಿ ನೀಡುತ್ತದೆ.
ಡಾ. ಮಂಜುನಾಥ ಬೇವಿನಕಟ್ಟಿ ಅವರು 1962 ಜೂನ್ 1 ರಂದು ಜನಿಸಿದರು. ಎಂ. ಎ. (ಜಾನಪದ) ಎಂ.ಎ. ( ಮನಃಶಾಸ್ತ್ರ ) ಪಿಎಚ್.ಡಿ ( ಜಾನಪದ ) ಪದವಿ ಪಡೆದ ಇವರು ಜಾನಪದ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಪದ ಆಚರಣೆಗಳು ಮತ್ತು ನಂಬಿಕೆಗಳು, ಮನೋವಿಜ್ಞಾನ : ಜನಪದ ಆಚರಣೆಗಳು ಮತ್ತು ದೈವಗಳು , ಮಹಿಳಾ ಅಧ್ಯಯನ ನೆಲೆಯಲ್ಲಿ ಜನಪದ ಆಚರಣೆ ಮತ್ತು ನಂಬಿಕೆಗಳು. ಗ್ರಾಮ ಅಧ್ಯಯನ ಇವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ. ಕರ್ನಾಟಕ ಜನಪದ ದೈವಗಳು ವಿಶ್ವಕೋಶ, ಕರ್ನಾಟಕ ಜನಪದ ...
READ MORE