ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನ ಮತ್ತು ಸಂಶೋಧನೆಯ ದೃಷ್ಟಿಕೋನ ಬದಲಾಯಿಸಲು ಪೂರಕವಾಗುವ ನೆಲೆಗಳನ್ನು ಈ ಕೃತಿ ನೀಡುತ್ತದೆ. ಸ್ಥಾಪಿತ ವಾದಗಳೊಂದಿಗೆ ಸಂವಾದ ನಡೆಸಿ ಹೊಸ ವಾದ ಪ್ರತಿಪಾದನೆ ಮಾಡುವುದು ಹಾಗೂ ಸಂಪನ್ಮೂಲಗಳ, ಸ್ಥಾನಮಾನಗಳ ಅಸಮಾನ ಹಂಚುವಿಕೆಗೆ ಕಾರಣವಾಗಿರುವ ಸತ್ಯವಾದಗಳನ್ನು ಅಲ್ಲಗಳೆದು ಹೊಸ ಸತ್ಯವಾದಗಳನ್ನು ಮುಂಚೂಣಿಗೆ ತರುವುದು ಸಂಶೋಧನೆಯ ದೊಡ್ಡ ಜವಾಬ್ದಾರಿ ಎಂಬುದನ್ನು ಲೇಖಕರು ಸೂಚಿಸುತ್ತಾರೆ.
ಸಂಶೋಧನೆ ಎಂದರೇನು?, ಯಾಕೆ ಸಂಶೋಧನೆ, ಹೇಗೆ ಸಂಶೋಧನೆ, ವಿಷಯ ಆಯ್ಕೆ, ಸಮಸ್ಯೀಕರಿಸುವುದು, ಸಂಶೋಧನ ಪ್ರಸ್ತಾವ, ಸಾಕ್ಷಿ ಪುರಾವೆಗಳ ಸಂಗ್ರಹ, ವಾದ ಮಂಡನೆ ಎಂಬ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ.
ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...
READ MORE