ಸಿದ್ಧಮಂಕ ಚರಿತೆಯ ಕೃತಿಕಾರ ಯಾರೆಂಬುದು ಸ್ಪಷ್ಟವಾಗಿಲ್ಲವಾದರೂ ಡಿ.ಎಲ್. ನರಸಿಂಹಾಚಾರ್ಯರು ಸಿದ್ದಯನೇ ಇದರ ಕರ್ತೃ ಇರಬೇಕೆಂದು ಊಹಿಸಿದ್ದಾರೆ. ಇದು ಹದಿನೇಳನೇ ಶತಮಾನಕ್ಕೆ ಸೇರಿರಬಹುದು ಎಂದು ಛಂದಸ್ಸು ಭಾಷೆ ಬಳಕೆಯನ್ನು ಆಧರಿಸಿ ಅವರು ಹೇಳಿದ್ದಾರೆ. ಒಂದು ವೇಳೆ ಇದು ನಿಜವಾದರೆ ಹಾಲುಮತ ಕುರಿತ ಮೊದಲ ಪುರಾಣ ಇದಾಗಬಹುದು ಎನ್ನುತ್ತಾರೆ ಡಾ. ಎಂ.ಎಂ. ಕಲಬುರ್ಗಿ.
ಅಲ್ಲಮಪ್ರಭು ಮತ್ತು ಸಿದ್ದರಾಮರಿಂದ ಪ್ರೇರಿತಗೊಂಡು ಮಂಕಯ್ಯ ಸಿದ್ಧಪಂಥದಿಂದ ಶರಣಪಂಥಕ್ಕೆ ಹೊರಳಿದ ಕತೆಯನ್ನು ಇದು ಒಳಗೊಂಡಿದೆ. ಭಕ್ತನೊಬ್ಬ ಭಂಡಾರ ಸಂಸ್ಕೃತಿಯಿಂದ ವಿಭೂತಿ ಸಂಸ್ಕೃತಿಗೆ ಹೊರಳಿದುದನ್ನು ಕೃತಿ ವಿವರಿಸುತ್ತದೆ. ಈ ಕಾವ್ಯ ನಾಲ್ಕು ಸಂಧಿಗಳನ್ನು ಒಳಗೊಂಡಿದ್ದು , ನಾಲ್ಕನೇ ಸಂಧಿ ಗಾತ್ರದಲ್ಲಿ ದೊಡ್ಡದು.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE