ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆ ಅಲ್ಲ ಎನ್ನುವ ಲೇಖಕರು ಅವರೆಡೂ ಪಂತಗಳ ಅನುಯಾಯಿಗಳು ಬೇರೆ ಬೇರೆ ಜಾತಿ ಸಮುದಾಯದವರು ಎಂದು ಅಭಿಪ್ರಾಯಪಡುತ್ತಾರೆ. ವೀರಶೈವ-ಲಿಂಗಾಯತರಿಗೆ ಹಾಗೂ ಬಸವಣ್ಣನಿಗೆ ಯಾವುದೇ ರೀತಿಯಿಂದ ನೋಡಿದರೂ ಸಂಬಂಧವಿಲ್ಲ ಎಂದು ಹೇಳುವ ಲೇಖಕರು ಬಸವಣ್ಣ ಯಾವುದೆ ವಚನ ಬರೆಯಲಿಲ್ಲ ಹಾಗೂ ಯಾವುದೇ ಶಿವಶರಣರು ವಚನಗಳನ್ನು ಅವರ ಕಾಲದಲ್ಲಿ ಬರೆಯಲೇ ಇಲ್ಲ ಎಂದು ವಾದಿಸುತ್ತಾರೆ.
ತುಮಕೂರು ಜಿಲ್ಲೆಗೆ ಸೇರಿದ ಮತ್ತು ಕುರುಬರ ಗುರು ವರ್ಗಕ್ಕೆ ಸೇರಿದ ಮಹಾದೇವ ಒಡೆಯರು (ಶಿವಗಣ ಪ್ರಸಾದಿ ಮಹಾದೇವ) 1420ರಲ್ಲಿ ರಚಿಸಿದ ಶೂನ್ಯ ಸಂಪಾದನೆ ಕೃತಿಯಲ್ಲಿ ಸಂವಾದಗಳನ್ನು ವಚನರೂಪದಲ್ಲಿ ಬರೆದು ವಚನಗಳಿಗೆ ನಾಮಾಂಕಿತ ನೀಡಿದವನು ಮಹಾದೇವ ಒಡೆಯರ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.
ಅಲ್ಲಮಪ್ರಭು, ಅಕ್ಕಮಹಾದೇವಿಯರಿಗೆ ಓದುಬರಹ ಬರುತ್ತಿರಲಿಲ್ಲ ಎನ್ನುವ ಲೇಖಕರು ಶಿವಶರಣರ ಹೆಸರಿನಿಂದ ಅನೇಕ ವಚನಗಳನ್ನು 18-19ನೆಯ ಶತಮಾನದಲ್ಲಿ ಲಿಂಗಾಯತ ಪ್ರಚಾರಕ್ಕಾಗಿ ಬರೆದು ವಚನಸಂಪುಟದಲ್ಲಿ ಸೇರಿಸಲಾಯಿತು ಎಂದು ಅಭಿಪ್ರಾಯಪಡುತ್ತಾರೆ. ವೀರಶೈವ ಅಥವಾ ವೀರಶೈವ ಸಾಹಿತ್ಯವು ಕುರುಬರ ಕುಲಗುರು ಒಡೆಯರಿಂದಲೇ ರಚಿಸಲಾಗಿದೆ ಎಂಬುದು ಲೇಖಕರ ನಿಲುವು.
ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು. ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...
READ MORE