ಡಾ. ಕಲಬುರ್ಗಿ ಮತ್ತು ಪಿ.ಕೆ.ರಾಠೋಡ ಅವರ ನೇತೃತ್ವದಲ್ಲಿ ಸಂಪಾದನೆಗೊಂಡ ಕೃತಿ ಜಗದ್ಗುರು ತೋಂಡದಾರ್ಯ ಮಠದ ಪರಂಪರೆಯನ್ನು ಸಾರಿ ಹೇಳುತ್ತದೆ. ಎಡೆಯೂರು ಸಿದ್ಧಲಿಂಗೇಶ್ವರರು ಮೊದಲು ಪೀಠಾಧ್ಯಾಕ್ಷರಾಗಿದ್ದ, ಅಧ್ಯಾತ್ಮಿಕ ನೆಲೆಯಲ್ಲಿಯೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿಯೂ ನಾಡಿನ ಪ್ರಮುಖ ಧಾರ್ಮಿಕ ಸಂಸ್ಥೆ ಇದು. ಮಠದ ದೊಡ್ಡ ಹಸ್ತಪ್ರತಿ ಭಂಡಾರ, ಪೂರ್ವದ ಜಗದ್ಗುರುಗಳಿಗೆ ದಾನ-ದತ್ತಿ ಇನಾಮುಗಳ ರೂಪದಲ್ಲಿ ಬಂದ ಕಾಗದ ಪತ್ರಗಳು, ಕೆಳದಿ ಶಾಸನ ಪತ್ರ, ಬೀಳಗಿ ಮತ್ತು ಬಾಗಳಿ ಅರಸರ ಪತ್ರ, ದೇಸಾಯರ ಪತ್ರ, ಗೌಡ-ಕುಲಕರ್ಣಿ ಪತ್ರ, ವಿಶೇಷ ಪತ್ರಗಳು ಸೇರಿದಂತೆ ಪ್ರಾಚೀನ ೮೯ ಕಾಗದಪತ್ರಗಳನ್ನು ಪರಿಶೀಲಿಸಿ ಕೃತಿ ಸಿದ್ಧಗೊಂಡಿದೆ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE