ಕುರುಬಕುಲದಲ್ಲಿ ಜನಿಸಿದ ರೇವಣಸಿದ್ಧನನ್ನೇ ಕಾಲಾಂತರದಲ್ಲಿ ರೇಣುಕ, ಆದಿರೇಣುಕ, ರೇಣುಕಾಚಾರ್ಯ, ರೇವಣಾರಾಧ್ಯ ಮುಂತಾಗಿ ಕರೆಯಲಾಯಿತು ಎಂಬ ಅಭಿಪ್ರಾಯ ಲೇಖಕರದು. ಕುರುಬರ ಕುಲಗುರು ವಡೆಯರೇ ಇಂದಿನ ಜಂಗಮರು ಎನ್ನುವ ಅವರು ಇಂದಿನ ಪಂಚಾಚಾರ್ಯರಿಗೆ ಕೇವಲ 200 ವರ್ಷಗಳ ಇತಿಹಾಸವಿದೆ ಎಂದು ಅಭಿಪ್ರಾಯ ಪಡುತ್ತಾರೆ. ಪಂಚಾಚಾರ್ಯರ ಮಠಗಳು ಮೂಲದಲ್ಲಿ ಕುರುಬರ ಕುಲಗುರು ವಡೆಯರಿಗೆ ಸೇರಿದ್ದವು ಎಂದು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಕುರುಬ ಸಮಾಜದಿಂದ ಬಹಿಷ್ಕರಿಸಲಾದ ವಡೆಯರು ಗುರುಸ್ಥಾನದಿಂದ ವಂಚಿತರಾಗಬೇಕಾಯಿತು. ದಲಿತ ಮೂಲದವರಾದ ಲಿಂಗಾಯತರಿಗೆ ದೀಕ್ಷೆ ಕೊಡುವವರು ಇರಲಿಲ್ಲ. ಆದ್ದರಿಂದ ಕೇವಲ 200 ವರ್ಷಗಳ ಹಿಂದೆ ಇವರಿಬ್ಬರೂ ಒಂದಾರು. ಆಗ ಹುಟ್ಟಿದ್ದೇ ವೀರಶೈವ-ಲಿಂಗಾಯತ ಈ ರೀತಿಯ ವಿವಾದಾಸ್ಪದ ಸಂಗತಿಗಳುಈ ಕೃತಿಯಲ್ಲಿವೆ.
ರೇವಣಸಿದ್ಧ ಕೊಲ್ಲಿಪಾಕಿಯ ಸ್ಥಾವರ ಲಿಂಗದಲ್ಲಿ ಹುಟ್ಟಿಲ್ಲ ಎನ್ನುವ ಲೇಖಕರು ಸಿದ್ಧಾಂತ ಶಿಖಾಮಣಿಯು 19ನೆಯ ಶತಮಾನದಲ್ಲಿ ತೆಲುಗಿನಲ್ಲಿ ಹುಟ್ಟಿದ ಕೃತಿ ಎಂದು ತೀರ್ಪು ನೀಡುತ್ತಾರೆ. ಈ ಕೃತಿಯ ಕರ್ತು ಶಿವಾಚಾರ್ಯನಲ್ಲ ಎನ್ನುವ ಅವರು ರೇಣುಕನು 12ನೆಯ ಶತಮಾನದಲ್ಲಿದ್ದ ಬೇರೊಬ್ಬ ಅಗಸ್ತ್ಯನಿಗೆ ಭೋಧಿಸಿದನು ಎಂದು ವಿವರಿಸುತ್ತಾರೆ. ರೇಣುಕ ಚರಿತ್ರೆಯಲ್ಲಿ ಬರುವ ವಿಭೀಷಣ ರಾವಣನ ಸಹೋದರನಲ್ಲ ಎಂದು ಅಭಿಪ್ರಾಯ ಪಡುವ ಲೇಖಕರು ವೀರಶೈವ ಮತ್ತು ಜಂಗಮ ಪದದ ಪ್ರಾಚೀನತೆ, ರೇವಣಸಿದ್ಧನ ಪವಾಡುಗಳನ್ನು, ರೇವಣಸಿದ್ಧನ ಜನ್ಮಸ್ಥಳ ಮತ್ತು ಕಾಲ, ರೇವಣಸಿದ್ಧನ ಸಮಾಧಿಸ್ಥಳ ಮತ್ತು ಕಾಲವನ್ನು 308 ಶಾಸನ ಆಧರಿಸಿ ಚಾರಿತ್ರಿಕ ಅಂಶಗಳನ್ನು ವಿವರಿಸಲಾಗಿದೆ ಎಂದು ಲೇಖಕರು ತಿಳಿಸುತ್ತಾರೆ. ಕೃತಿಯಲ್ಲಿ ಕ್ಷೇತ್ರಗಳ 16 ಪುಟಗಳಲ್ಲಿ ಬಣ್ಣದ ಚಿತ್ರಗಳನ್ನುನೀಡಲಾಗಿದೆ.
ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು. ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...
READ MORE