ಕ್ರಿ.ಶ. ಎಂಟನೇ ಶತಮಾನದ ಆಸುಪಾಸು ಕರ್ನಾಟಕದಲ್ಲಿ ಬಾದಾಮಿ ಚಾಲುಕ್ಯರು ವಿಜೃಂಭಿಸುತ್ತಿದ್ದ ಅವಧಿ. ಬಾದಾಮಿ ಚಾಲುಕ್ಯರ ಶಾಸನಗಳಲ್ಲೇ ಕಪ್ಪೆ ಅರಭಟ್ಟನ ಶಾಸನ ತುಂಬಾ ಪ್ರಸಿದ್ಧವಾದುದು. ’ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯನ್ ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ’ ಎಂದು ರಾಜನ ಹಿರಿಮೆಯನ್ನೂ ಕನ್ನಡದ ಹಿರಿಮೆಯನ್ನೂ ಆ ಶಾಸನ ಎತ್ತಿ ಹಿಡಿದಿದೆ. ಆದರೆ ಕಪ್ಪೆ ಅರಭಟ್ಟನ ಇತ್ಯೋಪರಿ ಬಗ್ಗೆ ಹಲವು ಗೊಂದಲಗಳು ಮೊದಲಿನಿಂದಲೂ ಇವೆ. ಇವುಗಳನ್ನು ಪರಿಹರಿಸುವ ಯತ್ನವೆಂಬಂತೆ ಮತ್ತು ಚಾಳುಕ್ಯರ ವಿವಿಧ ಶಾಸನಗಳ ಮೇಲೆ ಬೆಳಕು ಚೆಲ್ಲುವಂತೆ ನಾಡಿನ ಹಿರಿಯ ಸಂಶೋಧಕ ಡಾ. ಷ. ಶೆಟ್ಟರ್ ಹೊರತಂದಿರುವ ಕೃತಿ ’ಬಾದಾಮಿ ಚಾಳುಕ್ಯರ ಶಾಸನ ಸಾಹಿತ್ಯ’. |ಚಾಳುಕ್ಯರ ಕಾಲದ ಕನ್ನಡ ಲಿಪಿಯ ಬಗ್ಗೆಯೂ ಕುತೂಹಲಕರ ಮಾಹಿತಿ ಗ್ರಂಥದಲ್ಲಿದೆ.
ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...
READ MORE