ಎಂ.ಎಂ. ಕಲಬುರ್ಗಿ ಅವರು ರಾಜರ ಆಡಳಿತಾವಧಿಯಲ್ಲಿ ಕನ್ನಡ ಅಸ್ಮಿತೆ ಹೇಗಿತ್ತು ಎಂಬುದನ್ನು ಚಿತ್ರಿಸಿರುವ ಕೃತಿ ಇದು. ಒಂದು ವೇಳೆ ಅರಸರಲ್ಲಿ ಕನ್ನಡಪ್ರಜ್ಞೆ ಜಾಗೃತವಾಗಿದ್ದರೆ ಅದು ಬಿರುತ್ತಿದ್ದ ಪರಿಣಾಮಗಳನ್ನು ಕೃತಿ ಅಂದಾಜಿಸುತ್ತದೆ. ಗಂಗರ ಮಂತ್ರಿ ಚಾವುಂಡರಾಯನ ತಮಿಳುಪ್ರೀತಿ , ಹೊಯ್ಸಳರ ಮಂತ್ರಿ ಗಂಗರಾಜನ ಮರಾಠಿಪ್ರೀತಿ , ವಿಷ್ಣುವರ್ಧನನ ತಮಿಳುಮೂಲದ ಶ್ರೀವೈಷ್ಣವ ಮತಾಂತರ , ಕೃಷ್ಣದೇವರಾಯನ ತೆಲುಗು ಭಾಷಾಪ್ರೀತಿ - ಹಂಪಿ ವಿರೂಪಾಕ್ಷನ ಬದಲು ತಿರುಪತಿ ವೆಂಕಟೇಶನ ಭಕ್ತಿ, ಚಿಕ್ಕದೇವರಾಯನು ಶ್ರೀವೈಷ್ಣವನಾಗುವ ಮೂಲಕ ತಮಿಳು ಪ್ರಜೆ-ಭಾಷೆ-ಸಾಹಿತ್ಯಗಳಿಗೆ ತೋರಿದ ಒಲವು ಇವುಗಳು ಕನ್ನಡದ ಮೇಲೆ ಬೀರಿದ ಪ್ರಭಾವ ಎಂತಹುದು ಎಂಬುದರ ವಿಶ್ಲೇಷಣೆ ಇದೆ. ಅಲ್ಲದೆ ತಾಳೀಕೋಟೆ ಕದನದಲ್ಲಿ ಕನ್ನಡಿಗರು ಆದಿಲ್ಷಾಹಿ ಸಾಮ್ರಾಜ್ಯದೊಂದಿಗೆ ಕೈಜೋಡಿಸಲು ಕಾರಣವೇನು ಎಂಬ ಸ್ವಾರಸ್ಯಕರ ಅಂಶವೂ ಕೃತಿಯಲ್ಲಿದೆ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE