ವಚನ ಸಾಹಿತ್ಯವನ್ನು ಸರಳವಾಗಿ ಓದುಗರಿಗೆ ತಲುಪಿಸುವ ಕೃತಿ ಕೆ. ಸಿ. ಶಿವಪ್ಪ ಅವರ 'ವಚನ ದರ್ಶನ'. ವಚನ, ಪರವಸ್ತು, ಸಂಸಾರ, ಮನಸ್ಸು, ಶರಣಾಗತಿ, ಅರಿವು, ಭಕ್ತಿ, ಶಿವಪಥ ಇತ್ಯಾದಿ ಅಧ್ಯಾಯಗಳು ಕೃತಿಯಲ್ಲಿವೆ.
ವಚನ ಎಂದರೆ ಪ್ರತಿಜ್ಞೆ, ಆತ್ಮಸಾಕ್ಷಿ. ಶುದ್ದ ದೇಸೀ ಮನೋಭೂಮಿಕೆಯಲ್ಲಿ ಈ ವಚನಗಳು ರೂಪತಳೆದಿವೆ. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂಬ ಭಾವದಲ್ಲಿ ವಚನಕಾರರು ತಮ್ಮ ಅನಿಸಿಕೆಗಳಿಗೆ ವಾಕ್ ಶಕ್ತಿಯನ್ನು ಧಾರೆ ಎರೆದರು. ವಚನ ಬರಿ ಬುದ್ದಿಯ ವಿಷಯವಲ್ಲ ಅನುಭವದ ಸಂಗತಿ. ಆತ್ಮತೃಪ್ತಿಯ ಅರಿವಿನ ಸಾಧನ. ಸಿದ್ದರಾಮನ ದೃಷ್ಟಿಯಲ್ಲಿ ವಚನಗಳೆಂದರೆ ಈಶ್ವರನನ್ನು ಬೆಳಗುವ ಜ್ಯೋತಿ' ಎಂದು ಕೃತಿ ಪರಿಚಯಿಸುತ್ತದೆ.
ಇಲ್ಲಿ ವಿವಿಧ ವಚನಕಾರರ ವಚನಗಳು ಅದರ ಕುರಿತಾದ ವಿವರಣೆಯನ್ನೂ ಕೆ.ಸಿ ಶಿವಪ್ಪ ಸರಳಗನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.
ಕೆ.ಸಿ.ಶಿವಪ್ಪ-ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ26-07-1937 ರಲ್ಲಿ ಜನಿಸಿದ ಇವರು ಚಾಮರಾಜನಗರ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ತರಬೇತಿ ಮಹಾವಿದ್ಯಾಲಯ(ಮೈಸೂರು), ಕೇಂದ್ರ ಚರ್ಮಸಂಶೋಧನಾಲಯ (ಚೆನ್ನೈ), ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಚಿವಾಲಯ (ವಿಧಾನಸೌಧ), ಜೆ.ಎಸ್.ಎಸ್ ಮಹಾವಿದ್ಯಾಪೀಠ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಭಿತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ,ಚಂದ್ರಿಕೆ, ಚಾರುಲತೆ, ಚಿತ್ರಪತ್ರ(ಕವನ ಸಂಕಲನಗಳು). ಮುದ್ದು ರಾಮನ ಮನಸು, ಮುದ್ದುರಾಮನ ಬದುಕು-ಬೆಳಕು(ಚೌಪದಿಗಳ ಸಂಕಲನ). ಬದುಕಿಗೊಂದು ಭರವಸೆ, ಚಿತ್ತಚಿತ್ತಾರ(ವ್ಯಕ್ತಿ ವಿಕಸನ). ಮೌನಸ್ಪಂದನ, ಚಿತ್ತಪರಿಪಾಕ(ಚಿಂತನ ಬಿಡಿನುಡಿಸಂಚಯ). ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ(ಅನುವಾದ), ಅರವಿಂದ ದರ್ಶನ, ...
READ MORE