ಜೈನ ಕಲೆ, ಸಂಸ್ಕೃತಿ, ಹಸ್ತಪ್ರತಿಗಳು, ಜೈನ ಸಿದ್ಧಾಂತಗಳು, ಜೈನ ಸ್ಥಳನಾಮಗಳು, ಜೈನ ವಿದ್ವಾಂಸರು ಹೀಗೆ ಜೈನ ಧರ್ಮದ ವಿರಾಟ ಸ್ವರೂಪವನ್ನು”ಕರಿಯು ಕನ್ನಡಿಯಲ್ಲಿ’ ಎಂಬಂತೆ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟ ಕೃತಿ ’ಗನ್ಧೋದಕ’. ಅತ್ತಿಮಬ್ಬೆ, ಚಾವುಂಡರಾಯ, ಜೈನ ಸರಸ್ವತಿಯ ವಿಗ್ರಹ, ಜೈನ ಪ್ರಾಚೀನ ವಿದ್ಯಾಕೇಂದ್ರಗಳು ಕುರಿತು ಬರೆದ ಲೇಖನಗಳು ಈ ಕೃತಿಯ ತೂಕವನ್ನು ಹೆಚ್ಚಿಸುತ್ತಿವೆ. ಡಾ. ಎಸ್.ಬಿ. ಪದ್ಮಪ್ರಸಾದ ಅವರು ಮುನ್ನುಡಿ ಬರೆದಿದ್ದು ’ಸಂಕ್ಷಿಪ್ತವಾಗಿ ಬರೆದರೂ ಜೈನ ಧರ್ಮದ ಪ್ರತಿ ಅಂಶಗಳನ್ನು ಅಚ್ಚುಕಟ್ಟಾಗಿ ವಿವರಿಸಿದ್ದು, ಸಂಶೋಧನಾ ಕೃತಿಯ ಮಹತ್ವವನ್ನು ಪಡೆದಿದೆ’ ಎಂದು ಶ್ಲಾಘಿಸಿದ್ದಾರೆ. ಈ ಕೃತಿಯ ಬಹುತೇಕ ಲೇಖನಗಳು ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜೈನ ಪರಂಪರೆಯ ಸಮಗ್ರ ಚಿತ್ರಣ ನೀಡುತ್ತವೆ.
ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ. ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...
READ MORE