`ಸಂಪಾದಕರ ಸದ್ಯಶೋಧನೆ- 5’ ವಿಶ್ವೇಶ್ವರ ಭಟ್ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಇವು ನನ್ನಿಂದ ನಿರಾಯಾಸವಾಗಿ ಬರೆಯಿಸಿಕೊಂಡ ಬರಹಗಳು. ಇದನ್ನು ನಾನು ಒಂದು ಅಂಕಣವೆಂದು ಚೌಕಟ್ಟು ಹಾಕಿಕೊಂಡು ಬರೆದಿಲ್ಲ. ದೈನಂದಿನ ಅಂಕಣ ಬರೆಯುವಾಗ ಕೆಲವೊಮ್ಮೆ ವಿಷಯಕ್ಕಾಗಿ ತಿಣುಕಾಡುವುದುಂಟು. ಆದರೆ 'ಸಂಪಾದಕರ ಸದೃಶೋಧನೆ' ಬರೆಯುವಾಗ ನನಗೆ ಎಂದೂ ಅಂಥ ಅನುಭವ ಆಗಲಿಲ್ಲ. ಯಾವ ವಿಷಯವನ್ನಾದರೂ ಇಟ್ಟು 'ಸದೃಶೋಧನೆ' ತುರುಬು ಕಟ್ಟಬಹುದು. ಇಂಥ ವಿಷಯ ಬೇಡ ಎಂಬುದಿಲ್ಲ. ಇದೊಂಥರ ತಿರುಪತಿ ಹುಂಡಿಯಂತೆ. ಅಷ್ಟೊಂದು ವೈವಿಧ್ಯಮಯ. ಇಲ್ಲಿ ಭಕ್ತಿಯಷ್ಟೇ ಮುಖ್ಯ. 'ಸದ್ಯಶೋಧನೆ' ಯಾವ ಪ್ರಕಾರಕ್ಕೆ ಸೇರುತ್ತದೆ ಅಂತ ಕೇಳಿದರೆ ನನಗೆ ಗೊತ್ತಿಲ್ಲ. ಅದನ್ನು ವಿವರಿಸುವುದೂ ಕಷ್ಟ ಆದರೆ ಇಲ್ಲಿನ ಬರಹಗಳು ಪಟ್ಟಾಗಿ ಓದಿಸಿಕೊಂಡು ಹೋಗುತ್ತವೆ ಎಂದು ಹೇಳಬಹುದು. ಪ್ರತಿ ಬರಹದಲ್ಲೂ ಅಸಕ್ತಿಯುತ ವಿಷಯ, ಪ್ರಸಂಗ, ವಿಚಾರಗಳು ಸೆಳೆಯದೇ ಹೋಗುವುದಿಲ್ಲ. ಅದೇ ಮುಂದಿನ ಬರಹ ಓದುವಂತೆ ಕರೆದುಕೊಂಡು ಹೋಗುತ್ತವೆ. ಇಲ್ಲಿ ವಿಷಯದ ಹೊರೆಯ ಪ್ರಶ್ನೆಯೇ ಇಲ್ಲ. ಕಾರಣ ಅದರ ಗಾತ್ರ. ಹೀಗಾಗಿ ಈ ಅಂಕಣ ಸವಾರಿ ನನಗೂ ಸಲೀಸು. ಆದರೆ ಈ ಅಂಕಣಕ್ಕೆ ನಿತ್ಯವೂ ತಂದು ಸುರಿಯುವುದು ಸುಲಭವಲ್ಲ. ನಾಳೆಗೆ ಏನು ಎಂಬ ಪ್ರಶ್ನೆ ಇ೦ದೇ ಕಾಡುವಂತೆ ಮಾಡುತ್ತದೆ. ಇದು ನನ್ನದೊಂದೇ ಪ್ರಶ್ನೆಯಲ್ಲ, ನಾಳೆಯ 'ಸದ್ಯಶೋಧನೆ' ಏನಿರಬಹುದು ಎಂಬುದು ಓದುಗನ ಪ್ರಶ್ನೆಯೂ ಹೌದು. ನನಗೆ ಬರಿದಾಗುವುದು ಮತ್ತು ಭರ್ತಿಯಾಗುವುದು ಸಾಧ್ಯವಾಗುವುದಾದರೆ ಈ 'ಸದೃಶೋಧನೆ'ಯಲ್ಲಿ!
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE