ಶರಣೆಯರು ಶರಣರ ಅನುಸರಣೆಯಲ್ಲಿದ್ದು, ಪುರುಷಾಹಂಕಾರಕ್ಕೆ ಸವಾಲು ಹಾಕುವ ಛಲವನ್ನು ಆವಾಹಿಸಿಕೊಂಡರು. ಇದು ವಚನಕಾರರ ಯುಗದಲ್ಲಿ ಬಸವಾದ ಶರಣರು ಮಹಿಳೆಯರ ಆಲೋಚನಾ ಕ್ರಮಕ್ಕೆ ನೀಡಿದ ಉದಾರವಾದಿ ನೆಲೆ. ಅವರು ವರ್ಗ-ವರ್ಣ-ಜಾತಿ-ಲಿಂಗ ಸಮಾಜದ ಎಲ್ಲ ಪ್ರಶ್ನೆಗಳಿಗೆ ಪುರುಷಾಹಂಕಾರವಿಲ್ಲದೇ ವಿನಯದಿಮದ ವಚನಕಾರರು ಕೇಳಿದರೆಂಬುದಕ್ಕೆ ಶರಣೆಯರ ಎಲ್ಲ ವಚನಗಳು ಸಾಕ್ಷಿ. ಸಮತೂಕದ ಸಮಭಾವದ ದಾಂಪತ್ಯವೇ ಇದಕ್ಕೆ ಕಾರಣ. ಅಕ್ಕಮಹಾದೇವಿ, ಸತ್ಯಕ್ಕ, ಲಕ್ಕಮ್ಮ, ಸಂಕವ್ವೆ, ಲಿಂಗಮ್ಮ ಮುಂತಾದ ಶರಣೆಯರು ಎತ್ತುವ ಪ್ರಶ್ನೆಗಳಲ್ಲಿ ಮಹತ್ವದ ಆಯಾಮಗಳಿವೆ. ಈ ಕುರಿತು ಈ ಕೃತಿಯಲ್ಲಿ ಲೇಖಕರು ವಿವರವಾಗಿ ವಿವರಿಸಿದ್ದಾರೆ.
ವೃತ್ತಿಯಲ್ಲಿ ಪ್ರೌಢಶಾಲೆ ಶಿಕ್ಷಕರಾಗಿರುವ ಈರಮ್ಮ ಹಿರೇಮಠ ಅವರು ಜನಿಸಿದ್ದು 1976 ನವೆಂಬರ್ 10ರಂದು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ವಚನ ಸಾಹಿತ್ಯದಲ್ಲಿ ಮಹಿಳೆಯರು ಕುರಿತಂತೆ ’ಮಹಿಳಾ ವಚನ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳು’ ಕೃತಿಯನ್ನು ಬರೆದಿದ್ದಾರೆ. ...
READ MORE