ಮೊಗ್ಗಿನ ಮಾತು- ಕಾತ್ಯಾಯಿನಿ ಕುಂಜಿಬೆಟ್ಟು ಅವರ ಸಂಶೋಧನಾ ಕೃತಿ. ಡಾ. ಎಂ.ಎಂ. ಕಲಬುರ್ಗಿ ಅವರು ಈ ಕೂರಿತು ಬರೆದು ‘ ಮಕ್ಕಳ ಸಾಹಿತ್ಯದ ಕಾವ್ಯಮೀಮಾಂಸೆ ಇನ್ನೂ ನಿರ್ದಿಷ್ಟವಾಗಿರದ ಇಂದಿನ ಸಂದರ್ಭದಲ್ಲಿ ಕಾತ್ಯಾಯಿನಿ ಆ ಮೀಮಾಂಸೆಯನ್ನು ತಾನೇ ಸೃಷ್ಟಿಸಿ, ಸೀತಾರಾಮಭಟ್ಟರ ಈ ಸಾಹಿತ್ಯಕ್ಕೆ ತಾನೇ ಅನ್ವಯಿಸಿದ ಜೋಡು ಜವಾಬ್ದಾರಿಯನ್ನು ಇಲ್ಲಿ ಪೂರೈಸಿದ್ದಾರೆ. ಆಕರ ಶೋಧದಲ್ಲಿ ವಹಿಸಿದ ಶ್ರಮ ವಿಶ್ಲೇಷಣ ಶೋಧ –ವ್ಯಾಖ್ಯಾನ ಶೋಧಗಳಲ್ಲಿ ಅನುಕರಿಸಿದ ಕ್ರಮ ತುಂಬ ಸಮರ್ಪಕವೆನಿಸಿದೆ. ಇದರಿಂದಾಗಿ ಈ ಕೃತಿ ಏಕಕಾಲಕ್ಕೆ ಸಂಶೋಧನ-ವಿಮರ್ಶನ-ಸೃಜನಗಳ ಸಂಗಮವಾಗಿ ಪರಿಣಮಿಸಿದೆ. ಸಂವಹನಶೀಲ ಅಭಿವ್ಯಕ್ತಿಯೇ ಈ ಕೃತಿಯ ಇನ್ನೊಂದು ವಿಶೇಷತೆಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹುಟ್ಟೂರು ಉಡುಪಿಯ ಕಾಪು ಬಳಿಯ ಕರಂದಾಡಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ “ವಿಶಾರದ' ಪದವಿ. ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ(ರಿ) ಉಡುಪಿಯ 'ಪಣಿಯಾಡಿ ಪ್ರಶಸ್ತಿ’, ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ...
READ MORE