ಕಲ್ಯಾಣದ ಚಾಲುಕ್ಯರ ಇತಿಹಾಸ ಹಾಗೂ ಕೊಡುಗೆಗಳನ್ನು ಚರ್ಚಿಸುವ ಕೃತಿಯಿದು. ಈಗಿನ ಬೀದರ ಜಿಲ್ಲೆಯ ಬಸವ ಕಲ್ಯಾಣವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ನಡೆಸಿದ ಅರಸು ಮನೆತನ ಚಾಳುಕ್ಯರದು. ರಾಷ್ಟ್ರಕೂಟರ ನಂತರ ದಕ್ಷಿಣದ ಬಹು ಪ್ರಮುಖ ರಾಜ ಮನೆತನ. ಚಾಳುಕ್ಯ ದೊರೆಗಳು ಕನ್ನಡ-ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ. ತನ್ನ ಶಾಸನಗಳ ಮೂಲಕ ಗಮನ ಸೆಳೆದ ಆರನೇ ವಿಕ್ರಮಾದಿತ್ಯ, ಮಾನಸೊಲ್ಲಾಸ ವಿಶ್ವಕೋಶದ ಮೂಲಕ ಗಮನ ಸೆಳೆದ ಸೋಮೇಶ್ವರ ಸೇರಿದಂತೆ ಹಲವು ಪ್ರಮುಖ ಅರಸರು ಇತಿಹಾಸ, ಆಡಳಿತ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಸತ್ಯನಾರಾಯಣ ಅವರು ಚಾಲುಕ್ಯರ ಚರಿತ್ರೆಯನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.