ಹಿರಿಯ ಲೇಖಕ, ವಿಮರ್ಶಕ- ಚಿಂತಕ ಬಸವರಾಜ ಕಲ್ಗುಡಿ ಅವರ ಸಂಸ್ಕೃತಿ, ಸಾಹಿತ್ಯ ಮತ್ತು ಸಂಶೋಧನಾ ಬರಹಗಳ ಸಂಕಲನವಿದು. ಇದರಲ್ಲಿ ಒಟ್ಟು ೩೫ ಲೇಖನಗಳಿವೆ. ಅವುಗಳನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಮೈಮನದ ಮಾತು, ಕನ್ನಡ ಲೋಕ: ಆಧುನಿಕತೆಯ ವಿಭಿನ್ನ ಬಣ್ಣ, ಕನ್ನಡದ ಕಣ್ಮಣಿಗಳು, ಲೋಕಜ್ಞಾನ ಮತ್ತು ಕನ್ನಡ, ಕಾಲಜ್ಞಾನ.
ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ’ಸಾಹಿತ್ಯದ ಸಾತತ್ಯ, ಸಂಸ್ಕೃತಿಯ ವ್ಯಾಖ್ಯಾನ, ಸಾಮಾಜಿಕ ಪರಿಕರಗಳನ್ನು ಸಮಗ್ರವಾಗಿ ಬೇರೆ ಬೆರೆ ನೆಲೆಗಳಿಂದ ಶೋಧಿಸುವ ಕ್ರಮ ಕಲ್ಗುಡಿ ಅವರದು. ಶಾಸನ, ಸಂಶೋಧನೆ, ಜಾನಪದದ ವಿಶ್ಲೇಷಣೆ, ಹಳಗನ್ನಡ ಮತ್ತು ಆಧುನಿಕ ಕೃತಿಗಳ ಮುಖಾಮುಖಿ, ಸಿದ್ಧ, ನಾಥಪಂಥ, ಯೋಗಮಾರ್ಗ- ವಚನ, ಭಕ್ತಿ ಪರಂಪರೆ ಮುಂತಾದ ಚಳುವಳಿ-ಪರಂಪರೆಗಳನ್ನು ಪರಿಶೀಲಿಸುವ, ಪರಿವೀಕ್ಷಿಸುವ ಕ್ರಮ ಕನ್ನಡ ಸಂದರ್ಭದಲ್ಲಿ- ಅದರಲ್ಲಿಯೂ ವಿಮರ್ಶಾಲೋಕದಲ್ಲಿ ವಿಶಿಷ್ಟವಾದುದಾಗಿದೆ.
ಸುಮಾರು ಕಾಲು ಶತಮಾನದ ಅವಧಿಯಲ್ಲಿ ಪ್ರಕಟಗೊಂಡ ಇಲ್ಲಿಯ ಲೇಖನಗಳು ಕೇವಲ ವಸ್ತು, ವಿಷಯ, ಚಿಂತನೆಗಳ ಕಾರಣಕ್ಕೆ ಮಾತ್ರ ಅಪರೂಪದ್ದಾಗಿರದೆ, ಮಂಡಿಸುವ ಶೈಲಿ ಮತ್ತು ಆಲೋಚನಾ ಕ್ರಮಗಳ ಕಾರಣದಿಂದಲೂ ಮುಖ್ಯವಾಗಿವೆ. ಅದರಲ್ಲಿಯೂ ವಿಶೇಷವಾಗಿ ಭಾಷಾಶಾಸ್ತ್ರ, ಶಾಸನ ಅಧ್ಯಯನ, ಸಂಶೋಧನೆ, ಭಕ್ತಿ ಮತ್ತು ಜಾನಪದದಂಥ ವಿಚಾರಗಳನ್ನು ಕೇವಲ ತಾರ್ಕಿಕವಾಗಿಯಷ್ಟೇ ಅಲ್ಲ, ಅನುಭಾವಿಕ ನೆಲೆಯಲ್ಲಿಯೂ ಗ್ರಹಿಸುವ ರೀತಿ ವಿಶೇಷವಾದುದ್ದಾಗಿದೆ. ಇವು ಲೋಕಜ್ಞಾನಕ್ಕೂ ಹಿಡಿದ ಕನ್ನಡಿಯಾಗಿವೆ.’
1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು. ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2013