ಪುಸ್ತಕ ಪ್ರಕಾಶನ ಅಂದರೇನು? ಅದರ ಕೆಲಸಗಳೇನು ಇರುತ್ತವೆ? ಪುಸ್ತಕ ಪ್ರಕಾಶನದ ಕಾರ್ಯವೈಖರಿ ಹೇಗಿರುತ್ತದೆ? ಮುಂತಾದ ಹಲವಾರು ಉಪಯುಕ್ತ ಮಾಹಿತಿಗಳನ್ನು ಈ ಕೃತಿಯು ನೀಡಿದೆ.
ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ ಮತ್ತು ಪ್ರಕಾಶಕರಾಗಿರುವ ರಮಾಕಾಂತ್ ಜೋಶಿ ಅವರು ರಂಗಕರ್ಮಿ, ಲೇಖಕ ಜಿ.ಬಿ. ಜೋಶಿ ಅವರ ಮಗ. ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದಾರೆ. ತಂದೆ ಜಿ.ಬಿ. ಜೋಶಿ (ಜಡಭರತ) ತಾಯಿ ಪದ್ಮಾವತಿ. ಮೂಲತಃ ಧಾರವಾಡದವರಾದ ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಗುರುತಿಸಿಕೊಂಡವರು. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ. ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಷ್ಟು ಹೊಸಕಥೆಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅದೇ ...
READ MORE