ಬೇಂದ್ರೆಯವರು ಕವಿ ಹಾಗೂ ಮಾತುಗಾರ. ವಯೋವೃದ್ಧ ಬೇಂದ್ರೆ ಹಾಗೂ ಯುವಕ ಕವಿ ಚಂದ್ರಶೇಖರ ಪಾಟೀಲ ಅವರ ನಡುವಿನ ವಾಗ್ಯುದ್ಧವನ್ನು ಸೊಗಸಾಗಿ ಕಟ್ಟಿಕೊಡಲಾಗಿರುವ ಕೃತಿಯಿದು. ಬೇಂದ್ರೆಯವರ ಬಗ್ಗೆ ವಿಮರ್ಶಾತ್ಮಕ ಅನ್ನುವುದಕ್ಕಿಂತ ಹೆಚ್ಚಾಗಿ ಕಟುವಾದ ನೆಲೆಯಲ್ಲಿ ಮುಖಾಮುಖಿ ಆಗುವ ಕೃತಿಯಿದು. ಅಂಬಿಕಾತನಯದತ್ತರ ಕವಿತೆಗಳ ಬಗ್ಗೆ ಪ್ರೀತಿ-ಮೆಚ್ಚುಗೆಯ ಜೊತೆಯಲ್ಲಿಯೇ ಬೇಂದ್ರೆಯವರ ಬಗೆಗೆ ತಕರಾರು ವ್ಯಕ್ತಪಡಿಸುತ್ತದೆ. ಬೇಂದ್ರೆಯವರ ಇನ್ನೊಂದು ಮುಖವನ್ನು ಈ ಕೃತಿ ಅನಾವರಣ ಮಾಡುತ್ತದೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE