ಅಂಡಮಾನ್ ನಿಕೋಬಾರ್ನಲ್ಲಿದ್ದ ಜೈಲು ದೇಶದಲ್ಲಿಯೇ ಅತ್ಯಂತ ಕ್ರೂರ ಶಿಕ್ಷೆ ವಿಧಿಸಲಾಗುತ್ತಿದ್ದ ಜೈಲಂತೆ. ಆ ಜೈಲಿನಲ್ಲಿದ್ದ ಖೈದಿಗಳಿಗೆ ಸೂರ್ಯನ ಬೆಳಕೆ ಕಾಣಿಸುತ್ತಿರಲಿಲ್ಲವಂತೆ. ಕಗ್ಗತ್ತಲ ಜೈಲಾಗಿತ್ತಂತೆ. ಇಂತಹ ನೂರಾರು ವಿಷಯಗಳನ್ನು ನಾವು ಕೇಳಿರುತ್ತೇವೆ. ಕರ್ನಾಟಕದಲ್ಲಿರುವ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ದೇಶದ ಹಲವಾರು ಜೈಲುಗಳ ಬಗ್ಗೆ ಅಂತೆ ಕಂತೆಗಳ ಮಹಾಪೂರವೇ ಹರಿದುಬರುತ್ತದೆ. ಇಂದಿನ ರಾಜಕಾರಣಿಗಳಿಗೆ ಸೆರೆಮನೆವಾಸ ಎಂಬುದು ತೀರಾ ಸಾಮಾನ್ಯ ಸಂಗತಿಯಾಗಿರುವಾಗ ಜೈಲು ಕೂಡ ಮನೆ ಇದ್ದಂತೆ ಇರುತ್ತದೆ ಎನ್ನುತ್ತವೆ ಮಾಧ್ಯಮಗಳು.
ಇದಕ್ಕೆ ತದ್ವಿರುದ್ಧ ಎನ್ನುವಂತಿರುವ ಜೈಲುಗಳ ಬಗ್ಗೆ ತಮಗಾದ ಅನುಭವವನ್ನು ಲೇಖಕರು ವಿವರಿಸಿದ್ದಾರೆ. ತಪ್ಪೇ ಮಾಡದ ನಿರಪರಾಧಿಗಳು, ಸಣ್ಣ ಪುಟ್ಟ ತಪ್ಪಿನಿಂದಾಗಿ ಹಲವಾರು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಬಡಜನರು, ಅವ್ಯವಸ್ಥೆಯಿಂದ ಕೂಡಿದ ಕಾರಾಗೃಹ ವ್ಯವಸ್ಥೆ ಎಲ್ಲವನ್ನು ಎಳೆಎಳೆಯಾಗಿ ಲೇಖಕರು ಬಿಡಿಸಿಟ್ಟಿದ್ದಾರೆ.
©2025 Book Brahma Private Limited.