ಪತ್ರಿಕೋದ್ಯಮದಲ್ಲಿ 'ಪಗೋ' ಎಂದೇ ಗುರುತಿಸಲ್ಪಡುವ ಪದ್ಯಾಣ ಗೋಪಾಲಕೃಷ್ಣ ಅವರು ಉಪಸಂಪಾದಕರಾಗಿ ಕಾರ್ಯನಿರ್ವಹಿಸಿ, ವರದಿಗಾರರಾಗಿ ಬಳಿಕ ಅಂಣಕಾರರಾಗಿಯೂ ಗುರುತಿಸಿಕೊಂಡವರು. ಪತ್ರಕರ್ತನ ಬದುಕು ಹೊರಗೆ ನೋಡಿದಾಗ ಅತ್ಯಂತ ರಮ್ಯ ಮತ್ತು ರೋಚಕವಾಗಿರುತ್ತದೆ. ಆದರೆ ಆತ ತನ್ನ ವೈಯಕ್ತಿಕವಾದ ಎಲ್ಲ ಬದುಕನ್ನು ಒತ್ತೆಯಿಟ್ಟು ಪತ್ರಿಕೆಗೆ ತನ್ನನ್ನು ಅರ್ಪಿಸಿಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರ ಜೊತೆಗೆ, ಮಾಲಕರ ಜೊತೆಗೂ ಅವರು ಮುಖಾಮುಖಿಯಾಗಬೇಕಾಗುತ್ತದೆ. ಈ ಎಲ್ಲ ಅನುಭವಗಳು ಇಂದಿನ ಪತ್ರಕರ್ತರಿಗೆ ಒಂದು ಆದರ್ಶವಾಗುತ್ತದೆ. ಈ ಕಾರಣದಿಂದ ಪದ್ಯಾಣ ಗೋಪಾಲಕೃಷ್ಣ ಅವರ ಜೀವನೋತ್ಸಾಹದ ಈ ಕೃತಿ ಮುಖ್ಯವಾಗುತ್ತದೆ. ಪತ್ರಿಕೋದ್ಯಮದೊಳಗಿರುವ ಕಷ್ಟ ಕಾರ್ಪಣ್ಯ ಮಾತ್ರವಲ್ಲ, ಇತರ ರಾಜಕೀಯಗಳನ್ನೂ ಈ ಕೃತಿ ಸರಳವಾಗಿ ತೆರೆದಿಡುತ್ತದೆ.
ಕನ್ನಡ ಸಾಹಿತ್ಯ ವಲಯದಲ್ಲಿ ಪ.ಗೋ. ಎಂದೇ ಖ್ಯಾತಿ ಪಡೆದಿದ್ದ ಪದ್ಯಾಣ ಗೋಪಾಲಕೃಷ್ಣ ಅವರು ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಗಡಿಯ ಊರು ಅಡ್ಯನಡ್ಕದಲ್ಲಿ 19298 ರಲ್ಲಿ ಹುಟ್ಟಿದರು. ಬೆಂಗಳೂರಿಗೆ ಬಂದು ‘ವಿಶ್ವ ಕರ್ನಾಟಕ ದಿನಪತ್ರಿಕೆ ಸೇರಿದರು. ನಂತರ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದರು 1959 ರಲ್ಲಿ ಅವರು ಮಂಗಳೂರಿಗೆ ತೆರಳಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾದರು. ನಂತರ ಇಂಡಿಯನ್ ಎಕ್ಸಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿದ್ದರು. ತದನಂತರ ...
READ MORE