ಕ್ರೈಂ ಕತೆಗಳು ಡಿ.ವಿ. ಗುರುಪ್ರಸಾದ್ ಅವರ ಅನುಭವ ಕಥನಗಳ ಕುರಿತ ಕತೆಗಳು. ಈ ಕೃತಿಯಲ್ಲಿ ಲೇಖಕರು ಪೊಲೀಸ್ ವೃತ್ತಿಯಲ್ಲಿದ್ದ ಸಮಯದಲ್ಲಿ ತಮ್ಮ ಕೆಲಸದ ವೇಳೆ ಗಮನಕ್ಕೆ ಬಂದ ನೈಜ ಕ್ರೈಂ ಕತೆಗಳನ್ನು ಸುಧಾ ವಾರ ಪತ್ರಿಕೆಯಲ್ಲಿ ಕತೆ ರೂಪದಲ್ಲಿ ನಿರೂಪಣೆ ಮಾಡಿ, ಲೇಖನ ಕೊಡುತ್ತಿದ್ದರು. ಅಂತಹ ಬರವಣಿಗೆಯ ಮುಂದುವರೆದ ಭಾಗವೇ ಕ್ರೈಂ ಕಥೆಗಳು. ಇದರಲ್ಲಿರುವ ಬಹುಪಾಲು ಕತೆಗಳು ನೈಜ ಘಟನೆಗಳು ಆಗಿವೆ.
ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...
READ MORE