ರಾಜೇಂದ್ರ ಚೆನ್ನಿ ಅವರು ಚಿಂತಕರಾಗಿ, ವಿಮರ್ಶಕರಾಗಿ, ಕಥೆಗಾರರಾಗಿಯೂ ಪ್ರಸಿದ್ದಿಯಾದವರು. ’ಕೆಂಡಸಂಪಿಗೆ’ ಅಂತರ್ಜಾಲ ಸಾಂಸ್ಕೃತಿಕ ಪತ್ರಿಕೆಗೆ ಬರೆದ ಬರಹಗಳ ಸಂಗ್ರಹ ಇದು.
ತಾವು ಧಾರವಾಡದಲ್ಲಿ ಕಳೆದ ಕಾಲೇಜು ದಿನಗಳ ಅನುಭವಗಳನ್ನು ಅವರು ನೀಡಿದ್ದಾರೆ. ಹಾಸ್ಯ ಬರಹವೂ, ಲಲಿತ ಪ್ರಬಂಧವೂ ಅಲ್ಲದ ಆದರೆ ಅವೆರಡಕ್ಕೂ ಹೊರತಾದ ಹಗುರತನ ಇಲ್ಲಿನ ಬರಹಗಳಲ್ಲಿದೆ. ಬರೆದ ಪದ ಪದದಲ್ಲೂ ಹರೆಯ ಉಕ್ಕಿ ಹರಿದಿದೆ.
ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...
READ MORE