ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿ-ನಮ್ಮ ಊರಿನ ರಸಿಕರು. ಒಂದು ಅರ್ಥದಲ್ಲಿ ಇದೊಂದು ಅನುಭವ ಕಥನ. ಹಳ್ಳಿಯ ಪರಿಸರದಲ್ಲಿ ಲೇಖಕರು ತಮ್ಮ ಅನುಭವಕ್ಕೆ ಬಂದರ ವ್ಯಕ್ತಿ-ಘಟನೆ-ಸನ್ನಿವೇಶಗಳನ್ನು ಆಧರಿಸಿ, ಚಿತ್ರಿಸಿದ ಕೃತಿ ಇದು. ಗ್ರಾಮೀಣ ಹಾಗೂ ನಗರ ಜೀವನವನ್ನು ಕಟ್ಟಿಕೊಟ್ಟ ರೀತಿ ಅನನ್ಯ. ಭಾಷೆ ನವಿರಾಗಿದೆ. ಬರಹ ನಿಷ್ಕಲ್ಮಷವಾಗಿದೆ. .ಹಳ್ಳಿಯ ಜೀವನದ ಸೊಗಸುಗಳು, ಶಾಂತಿ, ನಿರಾಳ ಬದುಕು, ಜೀವನ ಪ್ರೀತಿ, ಸೌಹಾರ್ದತೆ, ಸಂಬಂಧಗಳ ಆರ್ದತೆ,, ವ್ಯಂಗ್ಯಗಳನ್ನು, ಮನಸಿನ ವಿಕಾರಗಳನ್ನು, ಅಹಮಿಕೆಯನ್ನು ನವಿರಾದ ಹಾಸ್ಯದೊಂದಿಗೆ ಇಲ್ಲಿಯ ಬರಹಗಳಿವೆ.
©2025 Book Brahma Private Limited.