ಅಮ್ಮ ಎಂಬ ಸಾರ್ವತ್ರಿಕ ಪ್ರಪಂಚದ ಪರಿಧಿ ದೊಡ್ಡದು. ಅಮ್ಮಂದಿರ ಕುರಿತು ಹೇಳುವಾಗ ಅನೇಕ ಸಾಮ್ಯಗಳು ಸಹಜ. ಹಾಗಾಗಿ ಅಮ್ಮ ಎಂಬ ಬಹುದೊಡ್ಡ ಜಗತ್ತನ್ನು ಅನನ್ಯವಾಗಿ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಆ ಕಾರಣದಿಂದ ಅಮ್ಮನ ಕುರಿತು ಯಾರೇ ಬರೆದರೂ ಅದು ಪ್ರತಿಯೊಬ್ಬ ಅಮ್ಮಂದಿರ ಬಹುತೇಕ ವಿವರಗಳನ್ನು ಹೇಳುತ್ತದೆ. ಹಾಗಾಗಿ ಇದು ನಮ್ಮಮ್ಮನ ಕತೆ ಅಲ್ಲವೇ?' ಎಂದು ಅನಿಸುವುದು ಸಹಜ. ಅಷ್ಟರ ಮಟ್ಟಿಗೆ ಅಮ್ಮಂದಿರ ಜಗತ್ತು ಸಾರ್ವತ್ರಿಕ. ಇಲ್ಲಿ ಅಮ್ಮನ ಕುರಿತು ಹೇಳುವಾಗ ಆನುಷಂಗಿಕವಾದ ಸಾಂಸ್ಕೃತಿಕ, ಸಾಮಾಜಿಕ, ಕೌಟುಂಬಿಕ ವಿಷಯಗಳ ಸಾವಯವ ಸಂಬಂಧ ಸಹಜವಾಗಿಯೇ ಬಂದಿವೆ. ಅಮ್ಮನ ಮನೆವಾರ್ತೆ, ಕೃಷಿ, ಗೃಹ ಕೈಗಾರಿಕೆ, ಕೈತೋಟಗಳ ಕುರಿತ ಜ್ಞಾನಗಳು ಸೇರಿದ ಒಟ್ಟು ಒಕ್ಕಲುತನ, ಬದುಕಿನ ಬಗೆಗಿನ ತೀವ್ರ ಮೋಹ, ಎಲ್ಲರೆದುರು ತಲೆ ಎತ್ತಿ ಬಾಳಬೇಕೆಂಬ ಛಲ, ಅದಕ್ಕಾಗಿ ನಡೆಸುವ ಹೋರಾಟಗಳ ಚಿತ್ರಣ ಇಲ್ಲಿದೆ.
.ಲೇಖಕ ಹಾಗೂ ಪತ್ರಕರ್ತ ಕೆ. ಕರಿಸ್ವಾಮಿ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೇನಹಳ್ಳಿ ಅಂಚೆ ವ್ಯಾಪ್ತಿಯ ಜವನಹಳ್ಳಿ ಗ್ರಾಮದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿ ಪದವೀಧರರು. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (1999), ಪತ್ರಿಕೋದ್ಯಮದಲ್ಲಿ (1999) ಸ್ನಾತಕೋತ್ತರ ಡಿಪ್ಲೊಮಾ, ಅಳಗಪ್ಪ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-2007.), ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಡಾಕ್ಟರೇಟ್ ಆಫ್ ಲಿಟರೇಚರ್ (ಡಿ.ಲಿಟ್-2021) ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನ ಮೆರು ಇನ್ಫೋ ಸಲ್ಯೂಷನ್ಸ್,ನಲ್ಲಿ ಮುಖ್ಯ ಸಂಪಾದಕ,, ಟೈಮ್ಸ್ ಇಂಟರ್ನೆಟ್ ಲಿಮಿಟೆಡ್.ನಲ್ಲಿ ಉಪಸಂಪಾದಕ, ಪ್ರಜಾಪ್ರಗತಿ ದಿನಪತ್ರಿಕೆಯ ಉಪ ಸಂಪಾದಕ, ನಂತರ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ವಿವಿಧ ...
READ MORE