ಉತ್ತರ ಧ್ರವದಿಂ ದಕ್ಷಿಣ ಧ್ರುವಕೂ ಇದು ಲೇಖಕಿಯ ಸಾಹಿತ್ಯ ಪಯಣದ ಕುರಿತಾದ ಪುಸ್ತಕ. ತಾವು ಭೇಟಿ ಮಾಡಿದ ಸ್ಥಳಗಳ ಬಗ್ಗೆ, ಅಲ್ಲಿನ ರೀತಿ ನೀತಿ, ಆಹಾರ ಪದ್ಧತಿ, ಅಲ್ಲಿಯ ಜನರ ಒಡನಾಟ ಇವುಗಳೆಲ್ಲವೂ ಇವರ ಈ ಕೃತಿಯಲ್ಲಿ ಬಿಂಬಿತವಾಗಿದೆ. ಅದನ್ನು ಹದಿಮೂರು ಭಾಗಗಳಲ್ಲಿ ಬರೆದಿರುವ ಲೇಖಕಿಯ ಅನುಭವ ಓದುವುದೇ ಒಂದು ಚಂದ. ಎ.ಐ. ಪಿ.ಸಿ ಈ ಸಂಸ್ಥೆಯ ಸದಸ್ಯೆ ಮಾತ್ರವಲ್ಲದೇ, ಬೆಂಗಳೂರು ಮಹಾನಗರಿಯ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸದಸ್ಯೆಯಾಗಿರುವ ಇವರು ಎಲ್ಲಾ ಸಂಸ್ಥೆಗಳಲ್ಲೂ ಸಕ್ರೀಯವಾಗಿ ಭಾಗವಹಿಸುತ್ತಿರುವುದು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಪ್ರಯಾಣದುದ್ದಕ್ಕೂ ತಾವು ಕಲಿತದ್ದು ಬೇಕಾದಷ್ಟಿದ್ದರೂ, 'ಕಲಿತದ್ದು ಅಂಗೈ ಅಗಲ, ಕಲಿಯಬೇಕಾದ್ದು ಕಡಲಗಲ' ಎಂದು ವಿನಮ್ರವಾಗಿ ಹೇಳುವ ಬೆಳವಾಡಿಯವರು ತಾವು ಸಂದರ್ಶಿಸಿದ ಸ್ಥಳಗಳ ಚಿತ್ರಗಳನ್ನು ಈ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಲಲಿತ ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದವರು.ತಾಯಿ ಸಂಗೀತಗಾರ್ತಿ ಮತ್ತು ಬರಹಗಾರ್ತಿ,ತಂದೆ ಸರ್ಕಾರಿ ಶಾಲಾ ಶಿಕ್ಷಕರು. ಮದುವೆಯ ನಂತರ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿ 16 ವರ್ಷ ವಾಸ ಮಾಡಿದ್ದಾರೆ.. ಚಿಕ್ಕ ವಯಸ್ಸಿನಿಂದಲೂ ಬರವಣಿಗೆ ಹವ್ಯಾಸ ಬೆಳೆಸಿಕೊಂಡ ಇವರ ಸಾಹಿತ್ಯ ಸೇವೆಗಾಗಿ ಪ್ರಶಸ್ತಿ ಪತ್ರ.ನೆನಪಿನ ಕಾಣಿಕೆಗಳು ಪಡೆದಿರುತ್ತಾರೆ. ರಾಷ್ಟ್ರೀಯ ಅಂತರ ರಾಷ್ಟ್ರೀಯ ಅಖಿಲಭಾರತ ಕವಯತ್ರಿಯರ ಸಮ್ಮೇಳನ ಸಂಸ್ಥೆಯಲ್ಲಿ pattern member, Executive ಮಾತ್ರವಲ್ಲದೆ ಬೆಂಗಳೂರು ಝೋನ್ ನ ಅಧ್ಯಕ್ಷರೂ ಆಗಿದ್ದಾರೆ.. ನಾಲ್ಕು ವರ್ಷಗಳು ಕರ್ನಾಟಕದ ಇನ್ಚಾರ್ಜ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನಕ್ಕಾಗಿ, ಗುಲ್ಬರ್ಗ ಬೀದರ್, ಮೈಸೂರು, ...
READ MORE