ಬಾಬಾ ಬೆಡ್‍ರೂಮ್ ಹತ್ಯಾಕಾಂಡ

Author : ರವಿ ಬೆಳಗೆರೆ

Pages 142

₹ 125.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಪುಟ್ಟಪರ್ತಿಯಲ್ಲಿ ನೆಲೆಸಿದ್ದ ಸಾಯಿ ಬಾಬಾ ಅವರ ನಿವಾಸದಲ್ಲಿ ನಡೆದಿರಬಹುದೆನ್ನಲಾದ ಕೊಲೆಗಳ ಕುರಿತು ಈ ಪುಸ್ತಕವನ್ನು ಬರೆಯಲಾಗಿದೆ. ಸಾಯಿ ಬಾಬಾ ಅವರಿಗಿರುವ ಅಪಾರ ಭಕ್ತ ಸಮೂಹವನ್ನು ಲೆಕ್ಕಿಸದೇ, ತಮ್ಮ ವಿಚಾರಗಳನ್ನು ಹಾಗೂ ತಾವು ಕಂಡುಕೊಂಡಂತಹ ವಾಸ್ತವಾಂಶಗಳನ್ನು ಅತ್ಯಂತ ರೋಚಕತೆಯಿಂದ ನಿರೂಪಿಸಿದ್ದಾರೆ. ಸಾಯಿ ಬಾಬಾ ಅವರ ಜೀವನದ ಕತ್ತಲ ಪುಟಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಲೇಖಕರಾದ ರವಿ ಬೆಳಗೆರೆ ಅವರು ಈ ಪುಸ್ತಕದಲ್ಲಿ ತಮ್ಮಲ್ಲಿರುವ ಪತ್ರಕರ್ತನನ್ನು ನಿಚ್ಛಳವಾಗಿ ತೆರದಿಟ್ಟಿದ್ದಾರೆ. ಸಾಯಿ ಬಾಬಾ ಅವರ ಸಾಮಾಜಿಕ ಕಾರ್ಯಗಳ ಕುರಿತು ಅವರನ್ನು ಹೊಗಳುತ್ತಲೇ, ಪುಟ್ಟಪರ್ತಿಯಲ್ಲಿ ನಡೆಯುವ ಕರಾಳ ಕೃತ್ಯಗಳ ಕುರಿತು ಸವಿವರವಾಗಿ ಬರೆಯುತ್ತಾ ಹೋಗುತ್ತಾರೆ ಲೇಖಕರು. ತುಂಬಾ ವಿರೋಧವನ್ನು ಕಂಡರೂ ಈ ಪುಸ್ತಕವು ಅಪಾರ ಓದುಗರನ್ನು ಆಕರ್ಷಿಸಿದೆ. ಪುಟ್ಟಪರ್ತಿಯಲ್ಲಿ ನಡೆದಂತಹ ಅಕ್ರಮಗಳನ್ನು ಮುಚ್ಚಿಹಾಕಲು ದೇಶದ ಪ್ರಧಾನಿಯಿಂದ ಹಿಡಿದು ಅಲ್ಲಿರುವ ಒಬ್ಬ ಪೊಲೀಸ್ ಅಧಿಕಾರಿಗಳವರೆಗೂ ಯಾವ ರೀತಿ ಪ್ರಯತ್ನಗಳು ನಡೆದಿದ್ದವು ಎಂಬುದರ ಕುರಿತು ಈ ಪುಸ್ತಕವು ವಿವರಿಸುತ್ತದೆ. ಅಪ್ಪಟ ಬೆಳಗೆರೆ ಶೈಲಿಯಲ್ಲಿರುವ ಈ ಪುಸ್ತಕ ಓದುಗರಿಗೆ ರೋಚಕತೆಯನ್ನು ಹುಟ್ಟಿಸುವುದರಲ್ಲಿ ಸಂಶಯವಿಲ್ಲ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books