ಮೈಸೂರು ನಗರದಲ್ಲಿ ಸಾಂಸ್ಕೃತಿಕ ದ್ವೀಪವಾಗಿ ಉಳಿದು ಬಂದಿರುವ ಕುಕ್ಕರಹಳ್ಳಿ ಕುರಿತಾದ ಒಂದು ದೀರ್ಘವಾದ ಕಥಾನಕವಾಗಿದೆ ಕೃತಿ. ಲೇಖಕರು ತಾವು ಕಂಡ ಅನುಭವವನ್ನು ಇಲ್ಲಿ ವಿವರಿಸಿದ್ದಾರೆ. ದಲಿತ ಗ್ರಾಮ ಜೀವನ ಚಿತ್ತ ಇದರ ಉದ್ದೇಶ. ದಲಿತ ಗ್ರಾಮ ಸಂದರ್ಭದಲ್ಲಿ ಸಮಸ್ಯೆ ಮತ್ತು ಸಂಘರ್ಷದ ಸ್ವರೂಪ ಇವುಗಳ ಕುರಿತು ವಿವರಗಳನ್ನು ನೀಡಿದ್ದಾರೆ. 150 ಪುಟಗಳಲ್ಲಿ ಇಪ್ಪತ್ತು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಪುಸ್ತಕ ಕುಕ್ಕರಹಳ್ಳಿಯ ಜೀವನ ಚರಿತ್ರೆಯಾಗುವಂತೆಯೇ ಲೇಖಕರ ಆತ್ಮಕಥನದ ಒಂದು ಭಾಗವಾಗಿದೆ. ಸಣ್ಣಕಥೆಗಳ ಎಳೆಗಳಿವೆ, ಭಾಗವಗೀತೆಯ ಅಂಶಗಳಿವೆ, ಪ್ರಬಂಧದ ಧಾಟಿಗಳು ಕೃತಿಯಲ್ಲಿ ಕಂಡು ಬರುತ್ತದೆ.
ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ...
READ MORE