ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಹಳ್ಳಿಯ ಹಾಗೂ ನಗರ ಪರಿಸರದಲ್ಲಿ ಕಂಡುಂಡ ಅನುಭಗಳ ದಾಖಲೀಕರಣವೇ -ಹೊಳೆದಂಡೆ ಅಂಕಣಮಾಲೆಯ ನೋಟ -3ನೇ ಕೃತಿ.
ಕೃತಿಯ ಪರಿವಿಡಿಯನ್ನು ’ನನ್ನ ಹಳ್ಳಿ ನನ್ನ ಜನ, ಪರಿಸರ -ಪ್ರಾಣಿ, ವಿಚಾರ, ಸಾಹಿತ್ಯ-ರಂಗಭೂಮಿ-ಚಲನಚಿತ್ರ, ರಾಜಕಾರಣ, ಕನ್ನಡ-ಖನ್ನ, ತಿರುಗಾಟ ಹಾಗೂ ವ್ಯಕ್ತಿ ಹೀಗೆ 8 ಭಾಗಗಳನ್ನುಮಾಡಿ, ಪ್ರತಿ ಭಾಗದಲ್ಲೂ ಸರಾಸರಿ 5-6 ಉಪ ಶೀಷೀಕೆಗಳೊಂದಿಗೆ, ಲೇಖಕರು ತಮ್ಮದೇ ವಿಚಾಗಳನ್ನು ವ್ಯಕ್ತ ಮಾಡಿದ್ದರೂ ಅವು ಬರೆಹದ ಗುಣಲಕ್ಷಣ ದೃಷ್ಟಿಯಿಂದ ಈ ಸಾಹಿತ್ಯವು ಸಾರ್ವತ್ರಿಕತೆಯನ್ನು ಪಡೆಯುವಷ್ಟು ಪರಿಣಾಮಕಾರಿಯಾಗಿವೆ.
ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...
READ MORE