`ಒಂದೊಳ್ಳೆ ಮಾತು 3’ ರೂಪಾ ಗುರುರಾಜ್ ಅವರ ಕೃತಿಯಾಗಿದೆ. ಇದಕ್ಕೆ ವಿಶ್ವೇಶ್ವರ ಭಟ್ ಅವರ ಬೆನ್ನುಡಿ ಬರಹವಿದೆ; ಪ್ರತಿದಿನ ಪತ್ರಿಕೆಗಳಿಗೆ ಬರೆಯುವುದು ಕಷ್ಟ ಅದರಲ್ಲೂ ಓದುಗರನ್ನು motivate ಮಾಡುವ ಅಂಕಣ ಬರೆಯುವುದು ಇನ್ನೂ ಕಷ್ಟ ಕಾರಣ ಬೇರೆಯವರನ್ನು motivate ಮಾಡುವುದಕ್ಕಿಂತ ಮುನ್ನ ನಮ್ಮನ್ನು ಮಾಡಿಕೊಳ್ಳಬೇಕು. ನಮ್ಮನ್ನು ಯಾರೂ ಬಂದು motivate ಮಾಡುವುದಿಲ್ಲ. ಆ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಮತ್ತು ದಿನವೂ ಮಾಡಿಕೊಳ್ಳಬೇಕು. ಇದು ಒಂಥರಾ ಕಬ್ಬಿಣವನ್ನು ಅಯಸ್ಕಾಂತಕ್ಕೆ ಉಜ್ಜಿ ಉಜ್ಜಿ, ಕಬ್ಬಿಣವನ್ನೇ ಅಯಸ್ಕಾಂತವಾಗಿ ಮಾಡಿಕೊಂಡಂತೆ. ಇದು ತುಸು ಕಷ್ಟದ ಕೆಲಸ. ಇಷ್ಟವಿದ್ದರೆ ಮಾತ್ರ ಮಾಡಬಹುದಾದ ಕೆಲಸ. ಆದರೆ ಈ ಕೆಲಸವನ್ನು ರೂಪಾ ಗುರುರಾಜ್ ಅತ್ಯಂತ ಪ್ರೀತಿ, ನಿಷ್ಠೆ, ಜವಾಬ್ದಾರಿಯಿಂದ ಮಾಡುತ್ತಾ ಬರುತ್ತಿದ್ದಾರೆ. 'ಒಂದೊಳ್ಳೆ ಮಾತು' ಅಂಕಣದಿಂದ ತಮ್ಮ ದಿನಚರಿಯನ್ನು ಆರಂಭಿಸುವ ಅಸಂಖ್ಯ ಓದುಗರಿದ್ದಾರೆ. ಈ ಅಂಕಣ ಒಂದು ದಿನ ಪ್ರಕಟವಾಗದಿದ್ದರೆ ಅಥವಾ ಬೇರೆ ಪುಟಗಳಲ್ಲಿ ಪ್ರಕಟವಾದರೂ ಸಿಡಿಮಿಡಿಗೊಳ್ಳುವ ಓದುಗರಿದ್ದಾರೆ. ಅಷ್ಟರಮಟ್ಟಿಗೆ 'ಒಂದೊಳ್ಳೆ ಮಾತು' ಅವರನ್ನು ಗಪ್ಪಾಗಿ ಕುಳ್ಳಿರಿಸಿಬಿಟ್ಟಿದೆ. ಬಿಸಿಬಿಸಿ ಕಾಫಿಯಂತೆ, ದಿನದ ಆರಂಭಕ್ಕೆ ಬೇಕಾಗುವ ಒಂದು ಹಿತವಾದ ಪ್ರೇರಣೆಯ ಗುಟುಕನ್ನು ರೂಪಾ ನೀಡುತ್ತಿದ್ದಾರೆ. ಇದು ಎಲ್ಲ ವರ್ಗದ ಓದುಗರಿಗೆ, ಎಲ್ಲ ಕಾಲಕ್ಕೆ ಆಪ್ತವಾಗುವ ಬರಹ. ಇದನ್ನು ಹೀರಿಕೊಂಡವನೇ ಪುಣ್ಯವಂತ! - ವಿಶ್ವೇಶ್ವರ ಭಟ್
ರೂಪಾ ಗುರುರಾಜ್ ಅವರು ಸಂವಹನ-ಲೇಖನ ಮತ್ತಿತರ ಸೃಜನಶೀಲ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ರೇಡಿಯೊ ಮತ್ತು ಸಂವಹನ, ಸ್ಕ್ರಿಪ್ಟ್ ಮತ್ತು ಸೃಜನಾತ್ಮಕ ಬರಹ, ಕಂಠದಾನ, ಕಾರ್ಯಕ್ರಮ ನಿರೂಪಣೆ ಮೊದಲಾದ ಹತ್ತು ಹಲವು ರಂಗಗಳಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಡಿ ಚಂದನ ಮತ್ತು ಎಫ್ಎಂ ರೇನ್ಬೋ, ನಮ್ ರೇಡಿಯೋ ಜತೆ ಹಲವಾರು ವರ್ಷ ಕೆಲಸ ಮಾಡಿದ್ದಾರೆ. ಸಾಕಷ್ಟು ರೇಡಿಯೋ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅವರ ಕಂಠಸಿರಿಯ ಸ್ಪರ್ಶವಿದೆ. ನಾನಾ ರೀತಿಯ 500ಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಉಡುಪು ಮತ್ತು ...
READ MORE