`ಕಗ್ಗ ಕಾಲಂ’ ನಾಗೇಶ್ ಜೆ. ನಾಯಕ ಅವರ ಅಂಕಣ ಬರಹವಾಗಿದೆ. ಇದಕ್ಕೆ ಎ ಎಸ್. ಮಕಾನದಾರ ಅವರ ಬೆನ್ನುಡಿ ಬರಹವಿದೆ; 'ಕಗ್ಗ ಕಾಲಂ' ಕೃತಿಯಲ್ಲಿ ಕಗ್ಗದ 49 ವಿಷಯ ವೈವಿಧ್ಯ ದ್ರಾಕ್ಷಿ ಗೊಂಚಲಿವೆ. ಈ ಥರಹೇವಾರಿ ಬದುಕಿನಲಿ, ಆಸೆಯೆಂಬ ಬಿಸಿಲುಗುದುರೆ, ಜಗವೆಲ್ಲ ನಗುತಿರಲಿ, ಕುಲದ ನೆಲೆ, ತಪ್ಪಿನ ಅರಿವು, ಹಳೇ ಬೇರು-ಹೊಸ ಚಿಗುರು, ನೋವು ನಗಿಸುವ ಕಲೆ, ಹುಸಿನಗುತ ಬಂದೇವ, ಲೋಕದ ಭಿನ್ನ ನಿಲುವು, ಅಲ್ಲಿರುವುದು ನಮ್ಮ ಮನೆ ಹೀಗೆ ಅನೇಕ ನಮ್ಮೊಳ ಮನಸ್ಸಿನ ಮಾತುಗಳನು ಆಪ್ತಸಖಿಯ ಮುಂದೆ ಪಿಸುಗುಟ್ಟಿದಂತಿವೆ. ನಕಾರಾತ್ಮಕ ಆಲೋಚನೆಗಳಿಗೆ ಇಂಬುಗೊಡದೆ, ಸಕಾರಾತ್ಮಕ ನಿಲುವಿಗೆ ಸ್ಪಂದಿಸಿ, ಕವಿದ ಮಂಕು ಕಳೆದು, ಅರಿವಿನ ದೀವಿಗೆಗಳನ್ನು ಹೊತ್ತಿಸಿದ ಕವಿಮಿತ್ರ ನಾಗೇಶ್ ನಾಯಕರ ಲೇಖನಗಳಲ್ಲಿ ಜೀವಂತಿಕೆಯನ್ನು ಕಾಣಬಹುದು. ಇವರ ಪದ್ಯದ ನಡುಗೆಯಂತೆ ಗದ್ಯದ ನಡುಗೆಯೂ ಚೆಂದವೆ. ಓದಿ ಆಸ್ವಾದಿಸುವ ತವಕ ಖಂಡಿತ ಸಾರಸ್ವತ ಲೋಕಕ್ಕಿದೆ. 'ಕಗ್ಗ' ಸಂಕೀರ್ಣ ಬದುಕಿನ ಕಗ್ಗಂಟು ಬಿಚ್ಚಲಿ.
ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...
READ MORE