ಲೇಖಕ ಎ.ಆರ್. ಮಣಿಕಾಂತ ಅವರು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿದ್ದಾಗ ಬರೆಯುತ್ತಿದ್ದ ಅಂಕಣಗಳ ಬರೆಹ-ಈ ಗುಲಾಬಿಯು ನಿನಗಾಗಿ. ಭಾವಪ್ರಧಾನವಾಗಿರುವ ಇಲ್ಲಿಯ ಬರೆಹಗಳು ಓದುಗರನ್ನು ಆಕರ್ಷಿಸುತ್ತಿವೆ. ಇವರ ಬರೆಹ ಶೈಲಿಯು ಆಪ್ತವೆನಿಸಿದ್ದು, ಮಾನವ ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡುತ್ತವೆ. ವಿಶೇಷವಾಗಿ ಸೌಮ್ಯ ಸ್ವಭಾವದ, ಅಂತರ್ಮುಖಿ ವ್ಯಕ್ತಿತ್ವದ ಇಲ್ಲವೇ ಮೂಕ ಮನಸುಗಳ ಪಿಸು ಮಾತು ಇಲ್ಲಿಯ ಬರೆಹಗಳ ವಸ್ತುಗಳಾಗಿವೆ.
ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ. ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...
READ MORE