ವಾರ್ತಾ ಭಾರತಿ ಪತ್ರಿಕೆಗೆ ಜಿ.ಎನ್. ರಂಗನಾಥ ರಾವ್ ಅವರು ಬರೆದ ‘ನೇಸರ ನೋಡು, ನೇಸಾರ ನೋಡು’ ಅಂಕಣಗಳ ಸಂಕಲನ ಇದಾಗಿದೆ. ಇದರಲ್ಲಿ ಸಾಹಿತ್ಯಕ ವಿಷಯಗಳ ಕುರಿತು ಲೇಖಕರು ಬರೆದ ಲೇಖನಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಇಲ್ಲಿರುವ ಬಹುತೇಕ ಹೆಚ್ಚಿನ ಬರಹಗಳು ವ್ಯಕ್ತಿಚಿತ್ರಗಳು ಎಂದು ಕರೆಯಬಹುದಾದ ಪ್ರಕಾರಕ್ಕೆ ಸೇರಿದವುಗಳು. ಆದರೆ ಅವು ವ್ಯಕ್ತಿಯ ಬರಹಗಾರ ಹಾಗೂ ವ್ಯಕ್ತಿಯ ಸಂಬಂಧದ ಸುತ್ತ ಹೆಣೆದಿರುವ ಬರಹಗಳಲ್ಲ. ಆ ವ್ಯಕ್ತಿಗಳ ಸಾರ್ವಜನಿಕ ಕ್ಷೇತ್ರದ ಮುಖವನ್ನು ಅವರ ಬರಹ-ಚಿಂತನೆಗಳ ಜೊತೆ ಮುಖಾಮುಖಿಯಾಗಿಸಿ ಮಾಡಿದ ವಿಶ್ಲೇಷಣೆಗಳಿಗೆ ಇಲ್ಲಿ ಪ್ರಾಧಾನ್ಯ ನೀಡಲಾಗಿದೆ. ಮಾಹಿತಿಗಳೊಡನೆ ಸರಳವಾಗಿ ಪ್ರಾರಂಭವಾಗಿ ಆಳ ವಿಸ್ತಾರಗಳನ್ನು ಪಡೆಯುತ್ತಾ ಸಾಗುವ ಇಲ್ಲಿನ ಬರಹಗಳು ವಿಸ್ತಾರವಾದ ನದಿಯ ಹರಿವನ್ನು ನೆನಪಿಸುತ್ತವೆ. ಅವುಗಳ ಹಿಂದೆ ಲೇಖಕರ ಸುದೀರ್ಘ ಅಧ್ಯಯನ ಹಾಗೂ ಬರಹಗಳ ಬಗೆಗಿನ ನೈತಿಕ ಶ್ರದ್ಧೆ ಕೆಲಸ ಮಾಡಿದೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE