`ಚುರುಕು ಚಾವಡಿ’ ಕೃತಿಯು ಧರ್ಮಭಾರತೀ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಪ್ರಶ್ನೆಗಳು ಕೃಷ್ಣಾನಂದಶರ್ಮಾ ಅವರು ಕೇಳಿದ್ದು, ಉತ್ತರವನ್ನು ಜಗದೀಶಶರ್ಮಾ ಅವರು ನೀಡಿರುತ್ತಾರೆ. ಜೀವಿಯೊಬ್ಬ ತನ್ನನ್ನು ತಾನರಿಯಲು ತಪಸ್ಸಿನಲ್ಲಿ ಮಗ್ನನಾದ. ಮಂತ್ರರೂಪದ ಉತ್ತರ ದೊರೆಯಿತು. ಅದು ವೇದವಾಯಿತು. ಶಿಷ್ಯನೊಬ್ಬ ಜಿಜ್ಞಾಸುವಾಗಿ ಗುರುವಿನಲ್ಲಿ ಪ್ರಶ್ನೆ ಕೇಳಿದ. ಗುರು ಉತ್ತರಿಸಿದ. ಅದು ಉಪನಿಷತ್ ಆಯಿತು. ಯಜ್ಞದ ನಡುವಿನಲ್ಲೋ, ಬದುಕಿನ ಬೇಗೆಗೆ ಬೆಂದೋ, ಮುಂದಿನ ದಾರಿ ಕಾಣದಾಗಿಯೋ ಪ್ರಶ್ನೆ ಕೇಳಿದರು. ಅರಿತವರು ಇತಿಹಾಸವ ಅರುಹಿದರು. ಇದು ಪುರಾಣವಾಯಿತು. ಬದುಕುವುದು ಹೇಗೆ? ಎಂದು ಕೇಳಿದರು. ಬದುಕಬಯಸಿದವರು. ತಿಳಿದವರಿತ್ತ ಸಂವಿಧಾನ ಸ್ಮೃತಿಯಾಯಿತು. ಹೀಗೆ, ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ಸನಾತನ ಸಾಹಿತ್ಯ ತನ್ನನ್ನು ಅನಾವರಣಗೊಳಿಸಿಕೊಂಡಿತು ಎಂಬುವುದನ್ನು ಇಲ್ಲಿ ಕಾಣಬಹುದು.
ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...
READ MORE