ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಅಂಕಣ ಬರೆಹಗಳ ಸಂಕಲನ. ‘ಅವಳು’ ಪರಿಕಲ್ಪನೆಯ ವಿವಿಧ ವೈವಿಧ್ಯಮಯವಾದ ಆಯಾಮಗಳನ್ನು ತೆರೆದು ತೋರಿದ್ದೇ ಈ ಕೃತಿಯ ವೈಶಿಷ್ಟ್ಯ. ಅವಳು-ಬರೀ ಹೆಣ್ಣು ಅಲ್ಲ; ತಾಯಿ, ಸಹೋದರಿ, ಚಿಕ್ಕಮ್ಮ ಹೀಗೆ ಏನೆಲ್ಲ ಸಂಬಂಧಗಳ ಸೂಚಕ, ಆತ್ಮೀಯತೆ, ಪ್ರೇಮ, ವಾತ್ಸಲ್ಯ ಇತ್ಯಾದಿ. ಇಂತಹ ಪರಿಕಲ್ಪನೆಗಳನ್ನು ಅಮರ್ಥವಾಗಿ, ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದೇ ಇಲ್ಲಿಯ ಅಂಕಣ ಬರೆಹಗಳ ಹೆಗ್ಗಳಿಕೆ.
ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...
READ MORE