ವಿಜಯ ಕರ್ನಾಟಕ-ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲೇಖಕ ಎ.ಆರ್. ಮಣಿಕಾಂತ ಅವರು ಬರೆದ ಅಂಕಣಗಳ ಬರೆಹಗಳ ಕೃತಿಯೇ-ಉಭಯ ಕುಶಲೋಪರಿ ಸಾಂಪ್ರತ. ಸಮಾಜ-ಶಿಕ್ಷಣ-ರಾಜಕೀಯ ಒಳಗೊಂಡು, ಆದರೆ, ವ್ಯಕ್ತಿಯ ಸಂಬಂಧ-ಭಾವ ಜಗತ್ತನ್ನು ಆವರಿಸುವ ವಿಷಯ ವಸ್ತುಗಳ ಅಂಕಣ ಬರೆಹಗಳೇ ಹೆಚ್ಚು.ವಿಷಯ ವಸ್ತುವಿನ ಆಯ್ಕೆ ಹಾಗೂ ನಿರೂಪಣಾ ಶೈಲಿಯು ಓದುಗರಿಗೆ ಆಪ್ತ ಎನಿಸುತ್ತವೆ.
ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ. ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...
READ MORE