‘ಸಂಪಾದಕರ ಸದ್ಯಶೋಧನೆ ಭಾಗ -1’ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳಾಗಿವೆ. ನನಗೆ 'ವಿಶ್ವವಾಣಿ' ಪತ್ರಿಕೆಯಲ್ಲಿ ಬರೆಯಲು ಆಗಲೇ ನಾಲೈದು ಅಂಕಣಗಳಿದ್ದವು. ಬೇರೆ ಕೆಲವು ಹೆಸರಿನಲ್ಲಿ ಬರೆಯುತ್ತೇನೆ ಎಂಬ ಆಪಾದನೆಗಳೂ ಇದ್ದವು. ಅವು ಸಾಲದು ಎಂಬಂತೆ, ಈ 'ಸಂಪಾದಕರ ಸದ್ಯಶೋಧನೆ'ಯನ್ನು ನಾನು ಬೇಕೆಂದೇ ಮೈ ಮೇಲೆ ಎಳೆದುಕೊಂಡೆ. ನನ್ನ ಪಾಡಿಗೆ ನಾನಿದ್ದಿದ್ದರೆ ಯಾರೂ ಕೇಳುತ್ತಿರಲಿಲ್ಲ. ಅಷ್ಟಕ್ಕೂ, ನಾನು ಬರೆದಿದ್ದು ಕಮ್ಮಿಯಾಯಿತು ಎಂದು ಯಾವ ಓದುಗನೂ ದೂರು- ದುಮ್ಮಾನ ಹೇಳಿಕೊಂಡಿರಲಿಲ್ಲ. ಅಷ್ಟಾಗಿಯೂ ಸುಮ್ಮನಿರದೇ, ಉದ್ದೇಶಪೂರ್ವಕವಾಗಿ ಕೆಡವಿಕೊಂಡ ಬರಹಗಳಿವು. ಬರೆಯುವುದು ಕಷ್ಟ. ಅದರಲ್ಲೂ ದಿನವೂ ಬರೆಯುವುದು ಇನ್ನೂ ಕಷ್ಟ. ಇದು ನಮಗೆ ನಾವು ವಿಧಿಸಿಕೊಳ್ಳಬಹುದಾದ ಹಿತವಾದ ಶಿಕ್ಷೆ. ಆದರೆ ಈ ಶಿಕ್ಷೆಯನ್ನು ಓದುಗರಿಗೆ ವರ್ಗಾಯಿಸಬಾರದಷ್ಟೇ. ಅದನ್ನು ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ. ಈ ಪುಸ್ತಕವನ್ನು ಯಾವ ಪುಟದಿಂದ ಬೇಕಾದರೂ ಓದಬಹುದು. ಹಿಂದಿನದಕ್ಕೂ ಮುಂದಿನದಕ್ಕೂ ಸಂಬಂಧವಿಲ್ಲ. ಪ್ರತಿ ಬರಹವೂ ಏಕಾಂಗಿ, ಇವು ಯಾವ ಪಂಥ, ಪ್ರಕಾರ, ಎಡ-ಬಲದ ಹಂಗಿಲ್ಲದ, ವಿಮರ್ಶಕರ ತೆಕ್ಕೆಗೆ ಸಿಗದ, ನಿರುಪದ್ರವಿ, ನಿರ್ವಿಕಾರ ಗುಣ ಹೊಂದಿದವು. ಆ ಕ್ಷಣಕ್ಕೆ ಹೊಸ ವಿಷಯ ಶೋಧಿಸುವ, ಹೇಳುವ ಹಂಬಲವೇ ಈ ಬರಹದ ತೇಲು ಭಾವ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE