‘ಬೆರಗಿನ ಬೆಳಕಿಂಡಿ’ ವಿಜ್ಞಾನಿ-ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಅವರು ಕಸ್ತೂರಿ ಮಾಸಪತ್ರಿಕೆಯ ನವನವೋನ್ಮೇಷ ಅಂಕಣಕ್ಕೆ ಬರೆದ ಲೇಖನಗಳ ಸಂಕಲನ. ವಿಜ್ಞಾನ ಬರವಣಿಗೆಗೆ ಬೇಕಾದ ಖಚಿತ ಮಾಹಿತಿ, ಸುಲಲಿತ ಭಾಷೆ ಹಾಗೂ ಸರಳ ನಿರೂಪಣೆಯ ರಸಗಂಧಗಳ ಹದವಾದ ಲೇಪನ ಇವರ ಶೈಲಿಯ ವೈಶಿಷ್ಟ್ಯ.
ತಂತ್ರಜ್ಞಾನದ ಹೊಸ ಹೊಸ ಕೌತುಕಗಳು ಈ ಪುಸ್ತಕದ ಪುಟ-ಪುಟಗಳಲ್ಲೂ ಪುಟಿಯುತ್ತಿವೆ. ಅದು ನೀರವ ರಾತ್ರಿಯ ನಿಮ್ಮ ಸುಖ ನಿದ್ದೆಯನ್ನು ಓಡಿಸುವ ಇ-ಹೊತ್ತಿಗೆ ನಿದ್ದೆಯೇ ಬರದಂತೆ ನಿಮಗೆ ಕಾಟ ಕೊಡುವ ಸೊಳ್ಳೆಯನ್ನು ನ್ಯಾನೋ ಈರುಳ್ಳಿಯಿಂದ ಓಡಿಸುವ ಬಗೆಗಿನ ಬರಹವಿರಬಹುದು. ನಾಳಿನ ಲೋಕದ ಅದೆಷ್ಟೋ ಹೊಳಹುಗಳನ್ನು ಅವರು ಬೆಳಕಿಂಡಿಯಲ್ಲಿ ಇಣುಕಿ ನೋಡಿದ್ದಾರೆ. ವಿಜ್ಞಾನಲೋಕದ ವಿವಿಧ ವಿದ್ಯಮಾನಗಳತ್ತ ಸದಾ ನೆಟ್ ನೋಟ ಹರಿಸುವ ಅವರ ಆಸಕ್ತಿಯ ದ್ಯೋತಕವೇ ಇಲ್ಲಿರುವ ಮಾಹಿತಿಗಳು.
ಸುಧೀಂದ್ರ ಹಾಲ್ದೊಡ್ಡೇರಿ ಖ್ಯಾತ ವಿಜ್ಞಾನ ಬರೆಹಗಾರರು. ಬೆಂಗಳೂರಿನ ಯು.ವಿ.ಸಿ.ಇ ಯಿಂದ ಬಿ.ಇ. ಹಾಗೂ ಮದ್ರಾಸಿನ ಐಐಟಿ ಯಿಂದ ಎಂ.ಟೆಕ್ ಪದವೀಧರರು. ಪ್ರತಿಷ್ಠಿತ ಸಂಸ್ಥೆಗಳಾದ ಐಐಎಸ್ ಸಿ, ಡಿ.ಆರ್ ಡಿಓ, ಎಚ್.ಎ.ಎಲ್ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ವೈಮಾಂತರಿಕ್ಷ ಕಂಪನಿಯ ತಾಂತ್ರಿಕ ಸಲಹೆಗಾರರಾಗಿದ್ದರು. ಲೋಕಶಿಕ್ಷಣ ಟ್ರಸ್ಟ್ ನ ಕಸ್ತೂರಿ ಮಾಸಪತ್ರಿಕೆಯಲ್ಲಿ ‘ನವನವೋನ್ಮೇಷ’ ಶೀರ್ಷಿಕೆಯ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ‘ಸೈನ್ಸ್ ಕ್ಲಾಸ್’ ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ನೆಟ್ ನೋಟ’ ಶೀರ್ಷಿಕೆಯ ಅಂಕಣಕಾರರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರೂ ಆಗಿದ್ದರು. ಏಳು ವರ್ಷ ಕಾಲ ಅವರು ವಿವಿಧ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧನೆ ಮಾಡಿದ್ದಾರೆ. ಕೃತಿಗಳು: ಸದ್ದು! ಸಂಶೋಧನೆ ನಡೆಯುತ್ತಿದೆ, ...
READ MORE