‘ಪದಸೋಪಾನ’ ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಂಕಣಬರಹಗಳ ಸಂಕಲನ. ನಮ್ಮಲ್ಲಿ ಕಾಲ’ ಮತ್ತು ಕ್ರಿಯೆ’ ಎಂಬೆರಡು ಶಬ್ದಗಳು ವರ್ತಮಾನವನ್ನೂ ನಿರಂತರತೆಯನ್ನೂ ಸೂಚಿಸುವಂಥವು. ‘ಪದಸೋಪಾನ’ದ ಬರಹಳಿಗೆ ಈ ಹಿನ್ನೆಲೆ ಇದೆ. ಅವು ವರ್ತಮಾನ’ದ ತಲ್ಲಣಗಳಿಗೆ ಸ್ಪಂದಿಸುತ್ತಲೇ ನಿರಂತರತೆ’ಯನ್ನು ಧ್ಯಾನಿಸುತ್ತವೆ. ಭಾಷೆ, ಸಾಹಿತ್ಯ, ಪರಿಸರ, ಪ್ರವಾಸ, ತತ್ವಜ್ಞಾನ, ಚರಿತ್ರೆ, ಪುರಾಣ, ವಿಜ್ಞಾನ, ಅಹಾರ, ಧರ್ಮ, ಪ್ರಭುತ್ವ, ಹೀಗೆ ಈ ಬರಹಗಳ ವಿಸ್ತಾರ, ವೈವಿಧ್ಯ ಬೆರಗು ಮೂಡಿಸುವಂತಿದೆ. ನಿಂತ ನೆಲದಲ್ಲಿ ಗಟ್ಟಿಯಾಗಿ ಕಾಲೂರಿ ಜಗತ್ತನ್ನು ಒಳಗೊಳ್ಳುವ ಇಲ್ಲಿಯ ರಚನಾವಿನ್ಯಾಸ ಅಂಕಣ’ವನ್ನು ಮೀರಿ ಆಕಾರ’ ಪಡೆಯುವಂಥದು. ವ್ಯಕ್ತಿ’ಯನ್ನು ಮೀರಿವ್ಯಕ್ತಿತ್ವ’ವನ್ನು ಪ್ರಕಟಪಡಿಸುವಂಥದು. ಜಾನಪದ’ದಿಂದ ಜಾಗತಿಕ’ದವರೆಗಿನ ವಿಸ್ತಾರ ಅಧ್ಯಯನ, ಆಳವಾದ ಪರಿಶ್ರಮ; ನರಹಳ್ಳಿಯವರ ಬರವಣಿಗೆಯ ಲಯ’ವನ್ನು ರೂಪಿಸಿದ್ದರೂ, ಅದರ ಅಂತಃಸತ್ವ ಅಡಗಿರುವುದು ಕನ್ನಡ ಬಹುತ್ವ ಪರಂಪರೆ’ಯಲ್ಲಿಯೇ. ಎಲ್ಲವನ್ನೂ, ಎಲ್ಲರನ್ನೂ ಬಿಡಿ’ಯಾಗಿಯಲ್ಲದೆ ಇಡಿ’ಯಾಗಿ ನೋಡಬೇಕೆನ್ನುವ ಅವರ ‘ಸಮಗ್ರ ನೋಟ’ ನಿಲವುಗಳು ಸಹಜವಾಗಿ ಈ ಕೃತಿಯಲ್ಲಿ ಪ್ರಕಟಗೊಂಡಿವೆ.
ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...
READ MORE